Connect with us

Dvgsuddi Kannada | online news portal | Kannada news online

ನವೀನ್ ಮೃತ ದೇಹ ಸೋಮವಾರ ಹಾವೇರಿಗೆ ಆಗಮನ; ದಾವಣಗೆರೆ ಮೆಡಿಕೆಲ್ ಕಾಲೇಜಿಗೆ ದೇಹ ದಾನಕ್ಕೆ ಫೋಷಕರ ನಿರ್ಧಾರ..!  

ಪ್ರಮುಖ ಸುದ್ದಿ

ನವೀನ್ ಮೃತ ದೇಹ ಸೋಮವಾರ ಹಾವೇರಿಗೆ ಆಗಮನ; ದಾವಣಗೆರೆ ಮೆಡಿಕೆಲ್ ಕಾಲೇಜಿಗೆ ದೇಹ ದಾನಕ್ಕೆ ಫೋಷಕರ ನಿರ್ಧಾರ..!  

ದಾವಣಗೆರೆ: ರಷ್ಯಾ ಮತ್ತು ಉಕ್ರೇ​ನ್‌​ ನಡುವಿನ ಯುದ್ಧ ಪ್ರದೇಶದಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಎಂಬಿಬಿಎಸ್‌ ವಿದ್ಯಾರ್ಥಿ ನವೀನ್‌ ಗ್ಯಾನಗೌಡರ್‌ ಮೃತದೇಹ ಸೋಮವಾರ  ಬೆಳಗಿನ ಜಾವ 3 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ನಂತರ ಸ್ವಗ್ರಾಮ ಹಾವೇರಿ ಜಿಲ್ಲೆಯ ಚಳಗೇರಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ನವೀನ್‌ ಮೃತ​ದೇ​ಹ​ವನ್ನು ವೈದ್ಯ​ಕೀಯ ವಿದ್ಯಾ​ರ್ಥಿ​ಗಳ ಉಪಯೋಗಕ್ಕಾಗಿ ದಾವ​ಣ​ಗೆ​ರೆಯ ಎಸ್‌.ಎ​ಸ್‌.​ ಮೆ​ಡಿ​ಕಲ್‌ ಕಾಲೇ​ಜಿಗೆ ನೀಡಲು ಕುಟುಂಬ​ದ​ವರು ನಿರ್ಧರಿಸಿದ್ದಾರೆ.  ಡಾಕ್ಟರ್‌ ಆಗಬೇಕೆಂಬ ಕನಸು ಕಂಡಿದ್ದ ನವೀನ್‌ ಆಸೆ ಈಡೇರಲಿಲ್ಲ. ಕೊನೇ ಪಕ್ಷ ಆತನ ದೇಹ ಮೆಡಿಕಲ್‌ ಓದುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನವೀನ್‌ ತಂದೆ ಶೇಖರಪ್ಪ ಗ್ಯಾನಗೌಡರ ತಿಳಿಸಿದ್ಧಾರೆ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top