Connect with us

Dvgsuddi Kannada | online news portal | Kannada news online

ಅಕಾಲಿಕ ಮಳೆಗೆ ಮಾವಿನ ಹೂ ಉದುರುವುದನ್ನು ತಡೆಯುವುದು ಹೇಗೆ..?

ಪ್ರಮುಖ ಸುದ್ದಿ

ಅಕಾಲಿಕ ಮಳೆಗೆ ಮಾವಿನ ಹೂ ಉದುರುವುದನ್ನು ತಡೆಯುವುದು ಹೇಗೆ..?

ದಾವಣಗೆರೆ: ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಅಕಾಲಿಕ ಮಳೆಯಾಗುತ್ತಿದ್ದು, ಜಿಲ್ಲೆಯ ಮಾವಿನ ರೈತರಲ್ಲಿ ಆತಂಕ ಮೂಡಿಸಿದೆ.  ಜಿಲ್ಲೆಯಲ್ಲಿ ಒಟ್ಟಾರೆ 3608  ಹೆಕ್ಟೇರ್ ಪ್ರದೇಶದಲ್ಲಿ ಮಾವನ್ನು ಬೆಳೆಯಲಾಗುತ್ತಿದ್ದು ಆದರಲ್ಲಿ  2, 200  ಹೆಕ್ಟೇರ್ ಪ್ರದೇಶ ಚನ್ನಗಿರಿ ತಾಲ್ಲೂಕು ಸಂತೆಬೆನ್ನೂರು ಹೋಬಳಿಯಲ್ಲಿದೆ.  ಮಳೆಯು ಅಕಾಲಿಕವಾಗಿ ಆಗುತ್ತಿರುವುದರಿಂದ ಹೂ ಉದುರುವ ಸಂಭವ ಹೆಚ್ಚಾಗಬಹುದೆಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ   ಬಸವನಗೌಡ ಎಂ.ಜಿ. ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನವರಿ ಮೊದಲ ವಾರ ಜಿಲ್ಲೆಯಾಧ್ಯಂತ ಶೇಕಡಾ ೭೦ ರಷ್ಟು ಮಾವಿನ ತೋಪುಗಳಲ್ಲಿ ಹೂ ಬಿಟ್ಟಿದ್ದು, ಕಳೆದ ವಾರ ಇಬ್ಬನಿ ಹೆಚ್ಚಾಗಿದ್ದರಿಂದ ಬೂದಿರೋಗದ ಹಾವಳಿ ಅಲ್ಲಲ್ಲಿ ಕಾಣಿಸಿತ್ತು.  ಪ್ರಸ್ತುತ ಮಳೆ ಬಂದಿರುವುದರಿAದ ಇಬ್ಬನಿಯು ತೊಳೆದು ಹೋಗಿ ಬೂದಿ ರೋಗ ಹತೋಟಿಗೆ ಬರುತ್ತದೆ ಆದರೆ ಭೂಮಿಯಲ್ಲಿ ತೇವಾಂಶ ಹೆಚ್ಚಾಗುವುದರಿಂದ ಹೂ ಉದುರುವ ಸಂಭವ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.

ಇದರ ನಿಯಂತ್ರಣಕ್ಕೆ ರೈತ ಭಾಂದವರು ಮಾವು ಸ್ಪೆಷಲ್ ಲಘು ಪೋಷಕಾಂಶವನ್ನು 5 ಗ್ರಾಂ ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಸಿಂಪರಣೆ ಮಾಡುವುದು ಉತ್ತಮ.  ರಸ ಹೀರುವ ಕೀಟದ ಭಾದೆ ಹೆಚ್ಚಾಗಿದ್ದರೆ ಪಿಪ್ರೋನಲ್ 5 % Sಅ ಕೀಟನಾಶಕವನ್ನು 1.5 ಮಿಲೀ ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬಹುದು.  ಹೆಚ್ಚಿನ ಮಾಹಿತಿಗಾಗಿ     ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಅಥವಾ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕೆಂದು ವರದಿಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top
(adsbygoogle = window.adsbygoogle || []).push({});