Connect with us

Dvgsuddi Kannada | online news portal | Kannada news online

ಬೆಂಗಳೂರು: 60 ಲಕ್ಷ ಹಣದೊಂದಿಗೆ ವಾಹನ ಚಾಲಕ ಎಸ್ಕೇಪ್ ..!

ಕ್ರೈಂ ಸುದ್ದಿ

ಬೆಂಗಳೂರು: 60 ಲಕ್ಷ ಹಣದೊಂದಿಗೆ ವಾಹನ ಚಾಲಕ ಎಸ್ಕೇಪ್ ..!

ಬೆಂಗಳೂರು:  ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬಲು ಹೋದಾಗ ಚಾಲಕ 60 ಲಕ್ಷ ಹಣದೊಂದಿಗೆ ಎಸ್ಕೇಪ್ ಆಗಿರುವ ಘಟನೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಡಾ.ರಾಜ್‍ಕುಮಾರ್ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬಲು ನಿನ್ನೆ ಸಂಜೆ 6.30ರಲ್ಲಿ ವ್ಯಾನ್ ಬಂದಿದೆ.ಹಣವನ್ನು ಎಟಿಎಂಗೆ ತುಂಬಲು ಸಿಬ್ಬಂದಿಗಳು ಕೇಂದ್ರದೊಳಗೆ ಹೋಗುತ್ತಿದ್ದಂತೆ ಇತ್ತ ಚಾಲಕ 60 ಲಕ್ಷ ಹಣದೊಂದಿಗೆ ವ್ಯಾನ್‍ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಎಟಿಎಂಗೆ ಹಣ ತುಂಬಿ ವಾಪಾಸಾದ ಸಿಬ್ಬಂದಿಗಳು ವಾಹನದಲ್ಲಿ ಚಾಲಕ ಇಲ್ಲದಿರುವುದು ಕಂಡು ಶಾಕ್ ಆಗಿದ್ದಾರೆ. ಕೂಡಲೇ ಸುತ್ತಮುತ್ತ ಪರಿಶೀಲನೆ ನಡೆದಿದ್ದಾರೆ. ಆದರೆ,  ಆತ ಪತ್ತೆಯಾಗಲಿಲ್ಲ.

ವಾಹನದಲ್ಲಿ ಹಣ ಪರಿಶೀಲಿಸಿದಾಗ 60 ಲಕ್ಷ ರೂಪಾಯಿ ಕಳ್ಳತನವಾಗಿರುವುದು ಗೊತ್ತಾಗಿದೆ. ಸಿಬ್ಬಂದಿಗಳು ಗಾಬರಿಗೊಂಡು ಕೂಡಲೇ ತಮ್ಮ ಮೇಲಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ.  ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.  ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಪರಾರಿಯಾಗಿರುವ ಚಾಲಕನ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top
(adsbygoogle = window.adsbygoogle || []).push({});