Connect with us

Dvgsuddi Kannada | online news portal | Kannada news online

ಚಿಗಟೇರಿ; ಅಪಾರ ಭಕ್ತರ ಸಮ್ಮುಖದಲ್ಲಿ ವಿಭೃಂಭಣೆಯಿಂದ ಜರುಗಿದ ಶ್ರೀ ನಾರದಮುನಿ ರಥೋತ್ಸವ

ಹರಪನಹಳ್ಳಿ

ಚಿಗಟೇರಿ; ಅಪಾರ ಭಕ್ತರ ಸಮ್ಮುಖದಲ್ಲಿ ವಿಭೃಂಭಣೆಯಿಂದ ಜರುಗಿದ ಶ್ರೀ ನಾರದಮುನಿ ರಥೋತ್ಸವ

ಹರಪನಹಳ್ಳಿ: ತಾಲೂಕಿನ ಚಿಗಟೇರಿಯ ನಾರದಮುನಿ ಸ್ವಾಮಿಯ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ವಿಜೃಂಭಣೆಯಿಂದ ಜರುಗಿತು.

ದೇವಸ್ಥಾನದಿಂದ ರಥದವರೆಗೂ ನಂದಿಕೋಲು, ಸಕಲವಾದ್ಯಗಳೊಂದಿಗೆ ಪಲ್ಲಕ್ಕಿಯನ್ನು ಮೂರು ಸುತ್ತು ರಥ ಸುತ್ತುವರೆದು ಸಂಜೆ 5.30ಕ್ಕೆ ಮೂಲಾ ನಕ್ಷತ್ರದಲ್ಲಿ ವೈಭವದಿಂದ ಜರುಗಿತು. ಮೂಲಾ ನಕ್ಷತ್ರದ ವೇಳೆಗೆ ರಥೋತ್ಸವ ಆರಂಭವಾಗುತ್ತಿದಂತೆ ಕತ್ತಾಳೆ ನಾರನ್ನು ಎಸೆದ ಭಕ್ತರು ಶಿವ ನಾರದ ಮುನಿ ಗೋವಿಂದಾ… ಗೋವಿಂದಾ ಎಂದು ಘೋಷಣೆ ಹಾಕಿದರು.

ಬೆಳಗ್ಗೆಯಿಂದಲೇ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಪೂಜೆ ಸಲ್ಲಿಸಿ, ಹರಕೆ ತೀರಿಸಿದರು. ಭಕ್ತರು ಅಕ್ಕಿ, ಬೆಲ್ಲ, ಹಾಲು, ಬಾಳೆಹಣ್ಣಿನ ವಿಶಿಷ್ಟ ಪ್ರಸಾದವನ್ನು ಮಣ್ಣಿನ ಮಡಿಕೆಯಲ್ಲಿ ತಯಾರಿಸಿ ಹರಕೆ ಒಪ್ಪಿಸಿದರು.

ನಾರು ಎಸೆದು ಭಕ್ತಿ ಸಮರ್ಪಣೆ; ನಾರುಗುಳ್ಳೆ ಇರುವ ಭಕ್ತರು ಇಲ್ಲಿಗೆ ಬಂದು ನಾರು ಎಸೆದು ಹರಕೆ ತೀರಿಸಿದರೆ, ನಾರುಗುಳ್ಳೆ ವಾಸಿಯಾಗುತ್ತವೆ ಎಂಬ ಪ್ರತೀತಿ ಇರುವುದರಿಂದ ನಾರಿನ ಕಟ್ಟನ್ನು ಎಸೆದು ಭಕ್ತಿ ಸಮರ್ಪಿಸಿದರು. ನಾಳೆ ಸಂಜೆ ಓಕುಳಿ ಉತ್ಸವ ಇರಲಿದೆ. ಕಳೆದ ವರ್ಷದ ರಥೋತ್ಸವ ವೇಳೆ ಚಕ್ರಕ್ಕೆ ಸಿಲುಕಿ ವ್ಯಕ್ತಿ  ಮೃತಪಟ್ಟಿದ್ದರು. ಹೀಗಾಗಿ ಈ ಬಾರಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

To Top