Connect with us

Dvgsuddi Kannada | online news portal | Kannada news online

ದಾವಣಗೆರೆ: 30 ಸಾವಿರ ಬೆಲೆಯ ಗಾಂಜಾ ವಶ; ಆರೋಪಿ ಬಂಧನ

crime sym

ದಾವಣಗೆರೆ

ದಾವಣಗೆರೆ: 30 ಸಾವಿರ ಬೆಲೆಯ ಗಾಂಜಾ ವಶ; ಆರೋಪಿ ಬಂಧನ

ದಾವಣಗೆರೆ: 30 ಸಾವಿರ ಬೆಲೆಯ ಒಣ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಒರ್ವ ಆರೋಪಿಯನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚನ್ನಗಿರಿ ತಾಲ್ಲೂಕು ಕೆರಬಿಳಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸೂರು ಗ್ರಾಮದ ಹೊರ ವಲಯದ ಕಾಶೀಪುರ ಕ್ಯಾಂಪ್ ಕಡೆ ಹೋಗುವ ದಾರಿಯಲ್ಲಿನ ಎಸ್ಸಾರ್ ಪೆಟ್ರೋಲ್ ಬಂಕ್ ಬಳಿಯ ಟಾರ್ ರಸ್ತೆಯ ಪಕ್ಕದಲ್ಲಿ ಗಸ್ತುವೇಳೆ ಮುನ್ನಾಫ್ ಅಲಿಯಾಸ್ ಮುನ್ನಾ ಸುಮಾರು 43 ವರ್ಷ ರಾಮಗೊಂಡನಹಳ್ಳಿ ಗ್ರಾಮದ ಆರೋಪಿ ಪ್ಲಾಸ್ಟಿಕ್ ಚೀಲದಲ್ಲಿ 1.770 ಕೆ.ಜಿ ಎಲೆ ಸೊಪ್ಪು, ಒಣಗಿದ ಕಡ್ಡಿ, ಹೂ ತೆನೆಭರಿತ ಬೀಜ ಹಾಗೂ ಘಾಟು ವಾಸನೆಯಿಂದ ಕೂಡಿದ ಒಣ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶ ಹೊಂದಿರುವುದನ್ನು ಪತ್ತೆ ಹಚ್ಚಿ ಜುಲೈ 30 ರಂದು ಬೆಳಗ್ಗೆ 9.30 ಕ್ಕೆ ವಶಕ್ಕೆ ಪಡೆದು ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಶಪಡಿಸಿಕೊಂಡ ಗಾಂಜಾದ ಅಂದಾಜು ಮೊತ್ತ ರೂ.30010 ಗಳಾಗಿರುತ್ತದೆ.

ಅಬಕಾರಿ ಜಂಟಿ ಆಯುಕ್ತರು ಹಾಗೂ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ದಾವಣಗೆರೆ ಹೊನ್ನಾಳಿ ಅಬಕಾರಿ ಉಪ ಅಧೀಕ್ಷಕರು ಮುರುಡೇಶ ಎಸ್.ಆರ್, ಅಬಕಾರಿ ನಿರೀಕ್ಷಕರು ರಶ್ಮಿ ಕೆ.ಆರ್ ಹಾಗೂ ಸಿಬ್ಬಂದಿಯವರು ದಾಳಿಯಲ್ಲಿ ಭಾಗವಹಿಸಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top