Connect with us

Dvgsuddi Kannada | online news portal | Kannada news online

ಹೊರ ಗುತ್ತಿಗೆ ಆಧಾರದಲ್ಲಿ 350 ಚಾಲಕರ ನೇಮಕಾತಿಗೆ ಕೆಎಸ್ ಆರ್ ಟಿಸಿ ನಿರ್ಧಾರ

ಪ್ರಮುಖ ಸುದ್ದಿ

ಹೊರ ಗುತ್ತಿಗೆ ಆಧಾರದಲ್ಲಿ 350 ಚಾಲಕರ ನೇಮಕಾತಿಗೆ ಕೆಎಸ್ ಆರ್ ಟಿಸಿ ನಿರ್ಧಾರ

ಬೆಂಗಳೂರು: 350 ಚಾಲಕರನ್ನು ಹೊರಗುತ್ತಿಗೆ ಆಧಾರದಲ್ಲಿ ಏಜೆನ್ಸಿ ಮೂಲಕ ನೇಮಿಸಿಕೊಳ್ಳಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ನಿರ್ಧರಿಸಿದೆ.

ಸಿಬ್ಬಂದಿಯ ತೀವ್ರ ಕೊರತೆ ಹಿನ್ನೆಲೆ ಡಿಪೋಗಳಿಗೆ ಹೊರಗುತ್ತಿಗೆ ಮೂಲಕ ಮೊದಲ ಬಾರಿಗೆ ಸಿಬ್ಬಂದಿ ನೇಮಿಸಿಕೊಳ್ಳಲು ಮುಂದಾಗಿದೆ.

ಕೆಎಸ್​ಆರ್​ಟಿಸಿಯಲ್ಲಿ ಗುತ್ತಿಗೆ ಆಧಾರ ಮೇಲೆ ನೇಮಕವಾಗುವ ಸಿಬ್ಬಂದಿಗಳಿಗೆ 25 ದಿನಗಳ ಹಾಜರಾತಿಗೆ ತಕ್ಕಂತೆ ಸಂಭಾವನಾ ವೇತನವಾಗಿ 23,000 ರೂಪಾಯಿ ನೀಡಲಾಗುತ್ತದೆ. ಇನ್ನು ಚಾಲಕ 25 ದಿನಗಳವರೆಗೆ ಸೇವೆಯನ್ನು ಬಳಸಿಕೊಳ್ಳದಿದ್ದರೆ ಪ್ರತಿ ಗಂಟೆಗೆ ಸ್ಟೀರಿಂಗ್ ಮತ್ತು ಪ್ರೋತ್ಸಾಹಕವಾಗಿ 100 ರೂ. ಅನ್ನು ವೇತನವಾಗಿ ನಿಗದಿಪಡಿಸಲಾಗುತ್ತದೆ. ಇದಾಗ್ಯೂ ನಿಯಮಿತ ನೌಕರರಿಗೆ ನೀಡುವ ಯಾವುದೇ ಭತ್ಯೆಯನ್ನು ಚಾಲಕರು ಪಡೆಯುವುದಿಲ್ಲ.ಈ ಯೋಜನೆಯ ಅಡಿಯಲ್ಲಿ ಮಂಗಳೂರು 150, ಪುತ್ತೂರು 100, ರಾಮನಗರ ಮತ್ತು ಚಾಮರಾಜನಗರ ಕೆಎಸ್​ಆರ್​ಟಿಸಿ ಡಿಪೋಗಳಿಗೆ ತಲಾ 50 ಚಾಲಕರನ್ನು ನೇಮಕ ಮಾಡಲಾಗುತ್ತದೆ.

ಇದು ಕೆಎಸ್​ಆರ್​ಟಿಸಿ ಸಂಸ್ಥೆಯ ಖಾಸಗೀಕರಣದ ಮೊದಲ ಹೆಜ್ಜೆಯಾಗಿದೆ. ಅಲ್ಲದೆ ಸಾರ್ವಜನಿಕ ಸಾರಿಗೆಯ ಕಲ್ಪನೆಗೆ ಇದು ದೊಡ್ಡ ಹೊಡೆತ ನೀಡಲಿದೆ. ಏಕೆಂದರೆ ಬಸ್ ಚಾಲಕನ ಕೆಲಸವು ಬಹಳಷ್ಟು ಅಪಾಯವನ್ನು ಒಳಗೊಂಡಿರುತ್ತದೆ. ಇದಾಗ್ಯೂ ಅವರು ಕೇವಲ 25 ಸಾವಿರ ರೂ.ಗೆ ಕೆಲಸ ಮಾಡುತ್ತಾರೆ ಎಂದು ಹೇಗೆ ನಿರೀಕ್ಷಿಸಲಾಗುತ್ತಿದೆ? ಅಲ್ಲದೆ ಖಾಸಗಿ ಉದ್ಯೋಗಿಯು ಪ್ರಸ್ತುತ ಇರುವ ಉದ್ಯೋಗಿಗಳಂತೆ ಬದ್ಧರಾಗಿರುವುದಿಲ್ಲ. ಇದಾಗ್ಯೂ ಕೆಎಸ್​ಆರ್​ಟಿಸಿಯನ್ನು ಖಾಸಗೀಕರಣಗೊಳಿಸಲು ಇಂತಹದೊಂದು ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಸಮಿತಿಯ ಎಚ್‌. ವಿ. ಅನಂತ ಸುಬ್ಬರಾವ್ ಕಿಡಿಕಾರಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top