Connect with us

Dvgsuddi Kannada | online news portal | Kannada news online

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ; ದಾವಣಗೆರೆಯಲ್ಲಿ ಸಂಭ್ರಮಾಚರಣೆ

ದಾವಣಗೆರೆ

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ; ದಾವಣಗೆರೆಯಲ್ಲಿ ಸಂಭ್ರಮಾಚರಣೆ

ದಾವಣಗೆರೆ: ಬೆಂಗಳೂರು-ದಾವಣಗೆರೆ ಮಾರ್ಗವಾಗಿ ಧಾರವಾಡಕ್ಕೆ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ಸ್ ರೈಲಿಗೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ದೆಹಲಿಯಿಂದ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿದರು. ದಾವಣಗೆರೆ ಆಗಮಿಸಿದ ವಂದೇ ಭಾರತ್ ಎಕ್ಸ್ ಪ್ರೆಸ್ಸ್ ರೈಲಿಗೆ ದಾವಣಗೆರೆ ನಿಲ್ದಾಣದಲ್ಲಿ ಸಂಸದ ಜಿ.ಎಂ.‌ಸಿದ್ದೇಶ್ವರ ನೇತೃತ್ವದಲ್ಲಿ ಸ್ವಾಗತ‌ಕೋರಲಾಯಿತು.

ಪ್ರಧಾನಮಂತ್ರಿ‌ ನರೇಂದ್ರ ಮೋದಿಯವರು ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ನೀಡಲಿರುವ ಇನ್ನೂ ನಾಲ್ಕು ವಂದೇ ಭಾರತ ಎಕ್ಸ್ ಪ್ರೆಸ್ ಗಳಿಗೂ ಸಹ ಚಾಲನೆ ನೀಡಿದರು.ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದರಾದ ಜಿ.ಎಂ ಸಿದ್ದೇಶ್ವರ, ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಯಶವಂತರಾವ್ ಜಾಧವ್ , ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಶ್ಯಕ್ಷ ಲೋಕಿಕರೆ ನಾಗರಾಜ್, ಶ್ರಿನಿವಾಸ್ ದಾಸಕರಿಯಪ್ಪ ಮಹಾನಗರ ಪಾಲಿಕೆಯ ಸದಸ್ಯರಾದ ಸೋಗಿ ಶಾಂತ ಕುಮಾರ್ , ಸೋಗಿ ಗುರು ಸೇರಿದಂತೆ ಮತ್ತಿತರು ಇದ್ದರು.

ಅತ್ಯಾಧುನಿಕ ಅತಿ ವೇಗ ಹಾಗೂ ವಿಶ್ವಮಟ್ಟದ ಸವಲತ್ತುಗಳಿಂದ ರೂಪಿಸಲಾಗಿರುವ ಭಾರತೀಯ ರೈಲ್ವೆಯ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ನಿತ್ಯ ಬೆಂಗಳೂರು-ಧಾರವಾಡ ಮದ್ಯೆ ಸಂಚಾರ ಮಾಡಲಿದ್ದು, ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿಯಲ್ಲಿ ನಿಲುಗಡೆ ಹೊಂದಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top