Connect with us

Dvgsuddi Kannada | online news portal | Kannada news online

ಭರತ ಹುಣ್ಣಿಮೆ: ಹೊರಗಿನ ಭಕ್ತರಿಗೆ ಉಚ್ಚಂಗಿದುರ್ಗ ಪ್ರವೇಶಕ್ಕೆ ನಿಷೇಧ

ಪ್ರಮುಖ ಸುದ್ದಿ

ಭರತ ಹುಣ್ಣಿಮೆ: ಹೊರಗಿನ ಭಕ್ತರಿಗೆ ಉಚ್ಚಂಗಿದುರ್ಗ ಪ್ರವೇಶಕ್ಕೆ ನಿಷೇಧ

ಹರಪನಹಳ್ಳಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಉಚ್ಚಂಗಿದುರ್ಗದ  ಉಚ್ಚೆಂಗೆಮ್ಮ ದೇವಿ ದೇವಸ್ಥಾನದಲ್ಲಿ ಫೆ. 26ರಿಂದ 27ರವರೆಗೆ ನಡೆಯುವ ಭರತ ಹುಣ್ಣಿಮೆಗೆ ಹೊರಗಿನ ಭಕ್ತರಿಗೆ  ಪ್ರವೇಶ ನಿಷೇಧಿಸಲಾಗಿದೆ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ  ಎಸ್.ವಿ. ರಾಮಚಂದ್ರ ಹೇಳಿದ್ದಾರೆ.

ಭರತ ಹುಣ್ಣಿಮೆ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಕೊರೋನಾ ಸೊಂಕು  ನಿಯಂತ್ರಣದಲ್ಲಿದ್ದ ಮಾತ್ರಕ್ಕೆ ಸೊಂಕು ತೊಲಗಿದೆ ಎಂದರ್ಥವಲ್ಲ. ರಾಜ್ಯದ ಕೆಲವೆಡೆ ಸೋಂಕು ಉಲ್ಭಣಗೊಂಡ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಐತಿಹಾಸಿ ಕಭರತ ಹುಣ್ಣಿಮೆ ಆಚರಣೆಯನ್ನು ಸ್ಥಳಿಯರಿಗೆ ಮಾತ್ರ ಸಿಮಿತಗೋಳಿಸಲಾಗಿದೆ ಎಂದರು.

ಈ ನಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾಮದ ಸುತ್ತಮುತ್ತ ಬಿಗಿ ಪೊಲೀಸ್ ವ್ಯವಸ್ಥೆ ಮಾಡಬೇಕು. ಜನ ಎತ್ತಿನ ಗಾಡಿ ಟ್ರ್ಯಾಕ್ಟರ್  ಸೇರಿದಂತೆ ಯಾವುದೇ ವಾಹನಗಳ ಮೂಲಕ  ಕ್ಷೇತ್ರಕ್ಕೆ  ಬಾರದಂತೆ ಕ್ರಮ ಕೈಗೊಳ್ಳಬೇಕು. ಹುಣ್ಣಿಮೆ ಜಾತ್ರೆಗೆ ಹೆಚ್ಚುವರಿ ಬಸ್ ಸೇವೆ ರದ್ದುಪಡಿಸಬೇಕು ಎಂದರು.

ಈ ಸಂದರಭದಲ್ಲಿ ಧಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಪ್ರಕಾಶ್, ತಹಶಿಲ್ದಾರ್ ನಂದೀಶ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಮತಾ, ತಾಲ್ಲೂಕು ಪಂಚಾಯಿತಿ ಸದಸ್ಯ ಪಿ.ಕೆಂಚನಗೌಡ, ಸಿ.ಪಿ.ಐ. ನಾಗರಾಜ್,  ಪಿಎಸ್ಐ ಕಿರಣ್ ಕುಮಾರ್, ಸಿ.ಡಿ.ಪಿ.ಓ. ಮಂಜುನಾಥ್, ದೇವದಾಸಿ ಪುನರ್ವಸತಿ ಅಧಿಕಾರಿ ಪ್ರಜ್ಞಾ ಪಾಟೀಲ್, ಟಿ.ಎಚ್.ಓ. ವೆಂಕಟೇಶ್, ಪಿ.ಡಿ.ಓ. ಉಮೇಶ್ , ಮುಖಂಡರಾದ ಚಟ್ನಿಹಳ್ಳಿರಾಜಪ್ಪ, ಸೊಕ್ಕೆ ನಾಗರಾಜ, ಪಣಿಯಾಪುರ ಲಿಂಗರಾಜ, ಟಿ.ಹನುಮಂತಪ್ಪ, ಸಿದ್ದಪ್ಪ.ಕೆಂಚಪ್ಪ, ಯುವರಾಜ, ಉಮೇಶನಾಯ್ಕ ಸೇರಿದಂತ ಮತ್ತಿತರರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top