Connect with us

Dvgsuddi Kannada | online news portal | Kannada news online

ದಾವಣಗೆರೆ: ಶೀಲ ಶಂಕಿಸಿ ಹೆಂಡತಿ, 2 ವರ್ಷದ ಮಗು ಕೊಲೆ ಮಾಡಿದ ಆರೋಪಿಗೆ ಜೀವಿತಾವಧಿ ಶಿಕ್ಷೆ

ದಾವಣಗೆರೆ

ದಾವಣಗೆರೆ: ಶೀಲ ಶಂಕಿಸಿ ಹೆಂಡತಿ, 2 ವರ್ಷದ ಮಗು ಕೊಲೆ ಮಾಡಿದ ಆರೋಪಿಗೆ ಜೀವಿತಾವಧಿ ಶಿಕ್ಷೆ

ದಾವಣಗೆರೆ: ಹೆಂಡತಿಯ ಶೀಲ ಶಂಕಿಸಿ ಹೆಂಡತಿ, ಮಗು ಕೊಲೆ ಮಾಡಿದ ಆರೋಪಿಗೆ ಜೀವಿತಾವಧಿ ಶಿಕ್ಷೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಪ್ರವೀಣ್ ಕುಮಾರ್ ಆರ್.ಎನ್, ಆರೋಪಿ ಮೇಲಿನ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಜೀವಿತಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.‌ಸರ್ಕಾರಿ ಅಭಿಯೋಜಕ ಜಯಪ್ಪ ಕೆ.ಜಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಮಾಯಕೊಂಡ ಗ್ರಾಮದ ಆರೋಪಿ ನಾಗರಾಜ, ಪತ್ನಿ, ಮಗಳನ್ನು ಕೊಂದಿದ್ದನು. ಆರೋಪಿ ನಾಗರಾಜನು ತನ್ನ ಹೆಂಡತಿಯ ಶೀಲದ ಬಗ್ಗೆ ಶಂಕಿಸಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದು, 2018 ರಂದು ಏಪ್ರಿಲ್ 18 ರಂದು ರಾತ್ರಿ ಊಟ ಮಾಡಿಕೊಂಡು ಮನೆಯಲ್ಲಿ ಮಲಗಿಕೊಂಡಿದ್ದು, ಬೆಳಗಿನ ಜಾವ 5.30ಕ್ಕೆ ಆರೋಪಿ ತಂದೆ ಮನೆಯಿಂದ ಹೊರಗೆ ಹೋದ ನಂತರ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಶಿಲ್ಪಾಳ ಬಳಿ ಗಲಾಟೆ ಮಾಡಿ, ನೀನು ಎಷ್ಟು ಹೇಳದರೂ ಬೇರೆಯವರ ಜೊತೆ ಮಾತನಾಡುತ್ತಿಯಾ ಎಂದು ಜಗಳ ತೆಗೆದು, ಬಚ್ಚಲು ರೂಮಿನ ಕಡೆ ಹೋದ ಶಿಲ್ಪಾಳನ್ನು ಕೆಳಗೆ ಕೆಡವಿ, ಅವಳ ಮೇಲೆ ಕುಳಿತುಕೊಂಡು ಅಲ್ಲಿಯೇ ಮೂಲೆಯಲ್ಲಿದ್ದ ಹಗ್ಗವನ್ನು ತೆಗೆದುಕೊಂಡು ಅವಳ ಕುತ್ತಿಗೆಗೆ ಜೋರಾಗಿ ಬಿಗಿದು ಸಾಯಿಸಿ ನಂತರ ಯಾರಿಗೂ ಗೊತ್ತಾಗದಂತೆ ನೇಣು ಹಾಕಿರುತ್ತಾನೆ. ನಂತರ ಮೃತ ಶಿಲ್ಪಾಳ 2 ವರ್ಷದ ಮಗಳು ಕೃತಿಕಾಳನ್ನು ಜವಾಬ್ದಾರಿ ನನ್ನ ಮೇಲೆ ಬೀಳುತ್ತದೆ ಎಂದು ಯೋಚಿಸಿ ಕೃತಿಕಾಳನ್ನು ನೇಣು ಹಾಕಿ ಕೊಲೆ ಮಾಡಿದ್ದನು.

ನಂತರ ಏನೂ ಗೊತ್ತಿಲ್ಲದ ಹಾಗೆ ಮನೆಯ ಹಿಂಬಾಗಿಲಿನಿಂದ ಹೋಗಿ ಹೊರಗಿನಿಂದ ಸಾಕ್ಷ್ಯ ನಾಶ ಪಡಿಸಿದ ಅಪರಾಧದ ಮೇರೆಗೆ ಆಗಿನ ತನಿಕಾಧಿಕಾರಿ ಗುರುಬಸವರಾಜ್ ಪ್ರಕರಣದ ತನಿಖೆ ಮಾಡಿ ಆರೋಪಿತನ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಸದರಿ ಪ್ರಕರಣದ ತನಿಖೆಯನ್ನು ಪ್ರಶಂಸಿಸಿ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಶ್ಲಾಘಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top