Connect with us

Dvgsuddi Kannada | online news portal | Kannada news online

ದಾವಣಗೆರೆ: ಕಡಲೆ ಬೆಳೆಯ ಕ್ಷೇತ್ರೋತ್ಸವ; ಬೀಜೋತ್ಪಾದನೆಗೆ  ಗಮನ ಕೊಡಿ- ಬೇಸಾಯ ತಜ್ಞ ಮಲ್ಲಿಕಾರ್ಜುನ

ದಾವಣಗೆರೆ

ದಾವಣಗೆರೆ: ಕಡಲೆ ಬೆಳೆಯ ಕ್ಷೇತ್ರೋತ್ಸವ; ಬೀಜೋತ್ಪಾದನೆಗೆ  ಗಮನ ಕೊಡಿ- ಬೇಸಾಯ ತಜ್ಞ ಮಲ್ಲಿಕಾರ್ಜುನ

ದಾವಣಗೆರೆ: ಕಡಲೆ ಬೆಳೆಯ ಕ್ಷೇತ್ರೋತ್ಸವದಲ್ಲಿ ಬೀಜೋತ್ಪಾದನೆಗೆ  ಗಮನ ಕೊಡಿ ಎಂದು ಬೇಸಾಯ ತಜ್ಞ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ  ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ ಇವರ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯ ಗುಚ್ಚ ಗ್ರಾಮಗಳ ಮುಂಚೂಣಿ ಪ್ರಾತ್ಯಕ್ಷಿಕೆಯ  ಕಡಲೆ ಬೆಳೆಯಲ್ಲಿ ಕ್ಷೇತ್ರೋತ್ಸವವನ್ನು ಆಚರಿಸಲಾಯಿತು. ಕೇಂದ್ರದ ಬೇಸಾಯ ತಜ್ಞ  ಮಲ್ಲಿಕಾರ್ಜುನ ಬಿ ಓ ಮಾತನಾಡಿ, ಸರಿಯಾದ ಸಮಯಕ್ಕೆ ಸರಿಯಾದ ತಂತ್ರಜ್ಞಾನದ ಬಳಕೆಯಿಂದ ಕಡಲೆ ಬೆಳೆಯಲ್ಲಿ ಉತ್ತಮ ಇಳುವರಿಯನ್ನು ಕಾಣಬಹುದು ಎಂದು ಕ್ಷೇತ್ರೋತ್ಸವ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಕಡಲೆ ಬೆಳೆಯು ಶೇಕಡ 50ರಷ್ಟು ಹೂವಾಡುವ ಸಂದರ್ಭದಲ್ಲಿ ಚಿಕ್ ಪಿ ಮ್ಯಾಜಿಕ್ ಸಿಂಪರಣೆಯಿಂದ ಕಾಯಿಗಳ ಗಾತ್ರ ಹೆಚ್ಚಾಗಿದ್ದು,ಮೋಹಕ ಬಲೆಗಳ ಅಳವಡಿಕೆಯಿಂದ ಸಿಂಪರಣೆಯ ಖರ್ಚು ಕಡಿಮೆಯಾಗಿದೆ ಎಂದು ಪ್ರಗತಿಪರ ರೈತರಾದ ಶ್ರೀ ಸೋಮನ ಗೌಡರು ಅಭಿಪ್ರಾಯಪಟ್ಟರು.

ಸಸ್ಯ ಸಂರಕ್ಷಣಾ ತಜ್ಞರಾದ ಡಾ. ಅವಿನಾಶ್ ಟಿ ಜಿ ರವರು ಕಾಯಿ ಕೊರಕದ ನಿರ್ವಹಣೆಗಾಗಿ  emmacatin  ಬೆಂಜೋಟೆ @ 0.5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ , ವಿಸ್ತರಣೆ ತಜ್ಞರಾದ ರಘುರಾಜ, ಪ್ರಗತಿಪರ ರೈತರಾದ ಸೋಮಣ್ಣಗೌಡರು, ಮಂಜುನಾಥ್, ನಾಗರಾಜ್ ಇತರರು ಭಾಗವಹಿಸಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top