ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಮುಂದಿನ ದಿನಗಳಲ್ಲಿ ಯೋಗವಿದ್ದು, ಒಳ್ಳೆಯ ಅವಕಾಶಗಳಿವೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.
ಕರ್ನಾಟಕ ಸೇರಿದಂತೆ ಎಲ್ಲೆಡೆ ರಾಜಕೀಯ ವಿಪ್ಲವ ಆಗುತ್ತಿದೆ. ಗ್ರಹಣ ಫಲದಲ್ಲಿ ಕೆಟ್ಟದಿದೆ, ಜಗತ್ತಿನಲ್ಲಿ ರಾಜಕೀಯ ವಿಪ್ಲವ ಆಗಲಿದೆ. ಕರ್ನಾಟಕ ರಾಜಕೀಯದಲ್ಲೂ ಬದಲಾವಣೆ ಆಗಲಿದೆ. ಸಿಎಂ ಬದಲಾವಣೆ ಬಗ್ಗೆ ಭವಿಷ್ಯ ಹೇಳಿದರೆ ನಾನು ಊರಿಗೆ ಹೋಗೋದೇ ಕಷ್ಟ. ದುಡ್ಡು ಮಾತನಾಡ್ತಾ ಇದೆ, ಈಗ ಮತನಾಡೋದು ಕಷ್ಟ ಇದೆ ಎಂದರು.
ನಂತರ ಮಾಜಿ ಸಿಎಂ ಸಿದ್ದರಾಮಯ್ಯರ ಬಗ್ಗೆ ಮಾತನಾಡಿ, ಅವರಿಗೆ ಒಳ್ಳೆಯ ಅವಕಾಶ, ಯೋಗ ಇದೆ. ಆದರೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸದೇ ಮುಗುಳು ನಗುತ್ತಲೇ ಮುಂದೆ ಸಾಗಿದರು.



