ದಾವಣಗೆರೆ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ (red cross davangere ) ಜಿಲ್ಲಾ ಶಾಖೆಯ ವತಿಯಿಂದ ದಾವಣಗೆರೆ ಜಿಲ್ಲಾ ಕಾರಾಗೃಹದಲ್ಲಿರುವ ಖೈದಿಗಳಿಗೆ ಮಾಸ್ಕ್, ಔಷದಿಗಳುಳ್ಳ ಆರೋಗ್ಯ ಸ್ವಾಸ್ಥ್ಯ ಕಿಟ್ ಗಳನ್ನು ( Hygiene Kit ) ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಎ. ಎಮ್. ಶಿವಕುಮಾರ್ ಮತ್ತು ಜಿಲ್ಲಾ ಕಾರಾಗೃಹದ ಅಧಿಕ್ಷಕಿ ಭಾಗೀರಥಿ ಅವರ ನೇತೃತ್ವದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿಗಳಾದ ಗೌಡ್ರ ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ, ಡಾ. ಗಿರೀಶ್, ನಿರ್ದೇಶಕರುಗಳಾದ ಇನಾಯತ್ಉಲ್ಲಾ, ಆನಂದಜ್ಯೋತಿ, ರವಿಕುಮಾರ್, ಡಿ.ಎನ್. ಶಿವಾನಂದ, ಶ್ರೀಕಾಂತ ಬಗರೆ, ನರೇಂದ್ರಪ್ರಕಾಶ್, ಡಾ . ಧನಂಜಯಮೂರ್ತಿ, ಕರಿಬಸಪ್ಪ್, ಜಗನ್, ಬಾಲಚಂದ್ರ್, ರಾಮಚಂದ್ರ ಶೆಟ್ಟರ್, ಪುರುಷೋತ್ತಮ, ಕೊಟ್ರೇಶ್, ರವೀಂದ್ರನಾಥ, ಶಿವಕುಮಾರ್, ಗಿರೀಶ್, ವಿನಾಯಕ, ಜೈಲರ್ ವೆರ್ಣೇಕರ, ವಿ.ಪಿ. ರಾಥೋಡ್ ಉಪಸ್ಥಿತರಿದ್ದರು.



