Connect with us

Dvgsuddi Kannada | online news portal | Kannada news online

ದಾವಣಗೆರೆ: ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿಗೆ ಪಿತೃ ವಿಯೋಗ

ದಾವಣಗೆರೆ

ದಾವಣಗೆರೆ: ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿಗೆ ಪಿತೃ ವಿಯೋಗ

ದಾವಣಗೆರೆ: ಕೇಂದ್ರ ಮಾಜಿ ಸಚಿವ ದಿ. ಕೊಂಡಜ್ಜಿ ಬಸಪ್ಪ ಅವರ ಪುತ್ರ ಹಾಗೂ ದಾವಣಗೆರೆ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ  ಅವರ ತಂದೆಯಾದ ರವೀಂದ್ರನಾಥ್ ಕೊಂಡಜ್ಜಿ (68) ಇಂದು (ಫೆ.06) ಬೆಳಗ್ಗೆ 11 ಗಂಟೆಗೆ ಬೆಂಗಳೂರು ನಿವಾಸದಲ್ಲಿ ನಿಧನ ಹೊಂದಿದ್ದಾರೆ.  ಕೊಂಡಜ್ಜಿ ಬಸಪ್ಪ ಅವರ 8 ಮಕ್ಕಳಲ್ಲಿ 6ನೇಯವರಾದ ರವೀಂದ್ರನಾಥ್ ಕೊಂಡಜ್ಜಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ರವೀಂದ್ರನಾಥ್ ಕೊಂಡಜ್ಜಿ ಅವರು ವೃತ್ತಿಯಲ್ಲಿ ಇಂಜಿನೀಯರ್ ಆಗಿದ್ದರು.  ಪತ್ನಿ, ಪುತ್ರ ನಿಖಿಲ್ ಕೊಂಡಜ್ಜಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.  ರವೀಂದ್ರನಾಥ್ ಅವರ ಸಹೋದರರಾದ ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಉಪಾಧ್ಯಕ್ಷ ಷಣ್ಮುಖಪ್ಪ ಕೊಂಡಜ್ಜಿ ಸೇರಿದಂತೆ ಕೊಂಡಜ್ಜಿ ಗ್ರಾಮದ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯನ್ನು ನಾಳೆ  (ಫೆ.07) ಬೆಳಗ್ಗೆ 12 ಗಂಟೆಗೆ ಬೆಂಗಳೂರಲ್ಲಿ ನಡೆಯಲಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top
(adsbygoogle = window.adsbygoogle || []).push({});