Connect with us

Dvgsuddi Kannada | online news portal | Kannada news online

ದಾವಣಗೆರೆ: ಮಳೆಗಾಗಿ ದುರ್ಗಾಂಬಿಕಾ ದೇವಿ ದೇವಸ್ಥಾನ ಆವರಣದಲ್ಲಿ ವಾರದ ಸಂತೆ; ಮೊದಲ ವಾರವೇ ಕೃಪೆ ತೋರಿದ ವರುಣ ದೇವ…!

IMG 20230702 160603

ದಾವಣಗೆರೆ

ದಾವಣಗೆರೆ: ಮಳೆಗಾಗಿ ದುರ್ಗಾಂಬಿಕಾ ದೇವಿ ದೇವಸ್ಥಾನ ಆವರಣದಲ್ಲಿ ವಾರದ ಸಂತೆ; ಮೊದಲ ವಾರವೇ ಕೃಪೆ ತೋರಿದ ವರುಣ ದೇವ…!

ದಾವಣಗೆರೆ: ಸಕಾಲಕ್ಕೆ ಮಳೆ ಬಾರದ ಹಿನ್ನೆಲೆ ವಾರದ ಸಂತೆಯನ್ನು ನಗರದ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಆವರಣದಲ್ಲಿ ನಡೆಸಲಾಯಿತು. ಐದು ವಾರ ನಡೆಯುವ ಸಂತೆ, ಇಂದು ಮೊದಲ ವಾರದ ಸಂತೆ ನಡೆಯಿತು. ಮೊದಲ ವಾರವೇ ವರುಣದೇವ ದಾವಣಗೆರೆ ನಗರ, ಸೇರಿ ಜಿಲ್ಲೆಯಲ್ಲಿ ಉತ್ತಮ ಮಳೆ ತಂದು ಕೃಪೆ ತೋರಿದ್ದಾನೆ.

ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣವಿದ್ದು, ಕೆಲ ಕಾಲ ತುಂತುತು ಮಳೆ ಸುರಿಯುತ್ತಿತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಜೋರು ಮಳೆಯಾಗಿದೆ‌. ಅರ್ಧಗಂಟೆಗೂ ಹೆಚ್ಚು ಕಾಲ ವರುಣ ದೇವ ಕೃಪೆ ತೋರಿದ್ದಾನೆ. ಸರಿಯಾದ ಸಮಯಕ್ಕೆ‌ ಮಳೆ ಬಾರದಿದ್ದರೆ ಐದು ವಾರ ಸಂತೆಯನ್ನು ಶ್ರೀ ದುರ್ಗಾಂಬಿಕ ದೇವಿ ಆರವರಣದಲ್ಲಿ ನಡೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಜನರ ನಂಬಿಕೆಗೆ ವರುಣ ದೇವ ಕಣ್ಣು ತೆರೆಯುತ್ತಲೇ ಬಂದಿದ್ದಾನೆ.

ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಪೂರ್ಣ ಪ್ರಮಾಣದಲ್ಲಿ ಬೀಜ ಬಿತ್ತನೆ ಕಾರ್ಯವಾಗಿಲ್ಲ.ರೈತರು ಹದವಾದ ಮಳೆಗಾಗಿ ಕಾಯುತ್ತಿದ್ದಾರೆ. ವಾರದ ಸಂತೆಯನ್ನು ಜುಲೈ ತಿಂಗಳಲ್ಲಿ ಬರುವ 2, 9, 16, 23, 30 ಒಟ್ಟು 5 ಭಾನುವಾರಗಳಂದು ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಸ್ಥಾನದ ಅವರಣದಲ್ಲಿ ನಡೆಸಲಾಗುತ್ತದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top