Connect with us

Dvgsuddi Kannada | online news portal | Kannada news online

ದಾವಣಗೆರೆ: ಮಳೆಗಾಗಿ ದುರ್ಗಾಂಬಿಕಾ ದೇವಿ ದೇವಸ್ಥಾನ ಆವರಣದಲ್ಲಿ ವಾರದ ಸಂತೆ; ಮೊದಲ ವಾರವೇ ಕೃಪೆ ತೋರಿದ ವರುಣ ದೇವ…!

ದಾವಣಗೆರೆ

ದಾವಣಗೆರೆ: ಮಳೆಗಾಗಿ ದುರ್ಗಾಂಬಿಕಾ ದೇವಿ ದೇವಸ್ಥಾನ ಆವರಣದಲ್ಲಿ ವಾರದ ಸಂತೆ; ಮೊದಲ ವಾರವೇ ಕೃಪೆ ತೋರಿದ ವರುಣ ದೇವ…!

ದಾವಣಗೆರೆ: ಸಕಾಲಕ್ಕೆ ಮಳೆ ಬಾರದ ಹಿನ್ನೆಲೆ ವಾರದ ಸಂತೆಯನ್ನು ನಗರದ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಆವರಣದಲ್ಲಿ ನಡೆಸಲಾಯಿತು. ಐದು ವಾರ ನಡೆಯುವ ಸಂತೆ, ಇಂದು ಮೊದಲ ವಾರದ ಸಂತೆ ನಡೆಯಿತು. ಮೊದಲ ವಾರವೇ ವರುಣದೇವ ದಾವಣಗೆರೆ ನಗರ, ಸೇರಿ ಜಿಲ್ಲೆಯಲ್ಲಿ ಉತ್ತಮ ಮಳೆ ತಂದು ಕೃಪೆ ತೋರಿದ್ದಾನೆ.

ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣವಿದ್ದು, ಕೆಲ ಕಾಲ ತುಂತುತು ಮಳೆ ಸುರಿಯುತ್ತಿತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಜೋರು ಮಳೆಯಾಗಿದೆ‌. ಅರ್ಧಗಂಟೆಗೂ ಹೆಚ್ಚು ಕಾಲ ವರುಣ ದೇವ ಕೃಪೆ ತೋರಿದ್ದಾನೆ. ಸರಿಯಾದ ಸಮಯಕ್ಕೆ‌ ಮಳೆ ಬಾರದಿದ್ದರೆ ಐದು ವಾರ ಸಂತೆಯನ್ನು ಶ್ರೀ ದುರ್ಗಾಂಬಿಕ ದೇವಿ ಆರವರಣದಲ್ಲಿ ನಡೆಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಜನರ ನಂಬಿಕೆಗೆ ವರುಣ ದೇವ ಕಣ್ಣು ತೆರೆಯುತ್ತಲೇ ಬಂದಿದ್ದಾನೆ.

ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಪೂರ್ಣ ಪ್ರಮಾಣದಲ್ಲಿ ಬೀಜ ಬಿತ್ತನೆ ಕಾರ್ಯವಾಗಿಲ್ಲ.ರೈತರು ಹದವಾದ ಮಳೆಗಾಗಿ ಕಾಯುತ್ತಿದ್ದಾರೆ. ವಾರದ ಸಂತೆಯನ್ನು ಜುಲೈ ತಿಂಗಳಲ್ಲಿ ಬರುವ 2, 9, 16, 23, 30 ಒಟ್ಟು 5 ಭಾನುವಾರಗಳಂದು ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಸ್ಥಾನದ ಅವರಣದಲ್ಲಿ ನಡೆಸಲಾಗುತ್ತದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top