Connect with us

Dvgsuddi Kannada | online news portal | Kannada news online

ದಾವಣಗೆರೆ: ಬಿರುಗಾಳಿ ಸಹಿತ ಭಾರೀ ಮಳೆ; ಜಿಲ್ಲೆಯಲ್ಲಿ 10.90 ಲಕ್ಷ ನಷ್ಟ

ಪ್ರಮುಖ ಸುದ್ದಿ

ದಾವಣಗೆರೆ: ಬಿರುಗಾಳಿ ಸಹಿತ ಭಾರೀ ಮಳೆ; ಜಿಲ್ಲೆಯಲ್ಲಿ 10.90 ಲಕ್ಷ ನಷ್ಟ

ದಾವಣಗೆರೆ: ಜಿಲ್ಲೆಯಲ್ಲಿ ಬಿರುಗಾಳಿ, ಗುಡುಗು, ಸಿಡಿಲು ಭಾರೀ ಮಳೆಯಾಗಿದ್ದು ಭತ್ತ, ಅಡಿಕೆ, ಬಾಳೆ ಸೇರಿದಂತೆ ಅಪಾರ ಪ್ರಮಾಣ ಬೆಳೆ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಮಳೆ ಹಾನಿಯಿಂದ ಒಟ್ಟು 10.90 ಲಕ್ಷ ನಷ್ಟವಾಗಿದೆ.

ದಾವಣಗೆರೆ ತಾಲ್ಲೂಕಿನ ಕೊಡಗನೂರು ಗ್ರಾಮದಲ್ಲಿ 3 ಎಕರೆ, ಜರೀಕಟ್ಟೆ ಗ್ರಾಮದಲ್ಲಿ 2.15 ಎಕರೆಯಲ್ಲಿ ಅಡಿಕೆ ಬೆಳೆ ಹಾಳಾಗಿದ್ದು, 1 ಲಕ್ಷ ನಷ್ಟವಾಗಿದೆ. ಗಿರಿಯಾಪುರದಲ್ಲಿ ಜಿ.ಎಸ್. ಅಜ್ಜಪ್ಪ ಹಾಗೂ ನಾಗರಾಜಪ್ಪ ಅವರಿಗೆ ಸೇರಿದ ಹತ್ತಾರು ಎಕರೆ ಪ್ರದೇಶದ ಭತ್ತ ನಾಶವಾಗಿದೆ. ಹರಿಹರ ತಾಲ್ಲೂಕು ವ್ಯಾಪ್ತಿಯ ಇಂಗಳಗೊಂದಿ, ಧೂಳೆಹೊಳೆ ಗ್ರಾಮದಲ್ಲಿ 30 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು, 1.80 ಲಕ್ಷ ಹಾನಿಯಾಗಿದೆ.

ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 2 ಕಚ್ಚಾ ಮನೆ, 15 ಎಕರೆ ಬಾಳೆ, 5 ಎಕರೆಯಲ್ಲಿ ಬೆಳೆದಿದ್ದ ಅಡಿಕೆ ಬೆಳೆ ನಷ್ಟವಾಗಿದ್ದು, 6 ಲಕ್ಷ ನಷ್ಟವಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ 20 ಎಕರೆ ಭತ್ತ ಹಾನಿಯಾಗಿದ್ದು, 2 ಲಕ್ಷ ನಷ್ಟವಾಗಿದೆ. ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಎಕರೆ ಬಾಳೆ ಹಾನಿಯಾಗಿದ್ದು.10 ಸಾವಿರ ನಷ್ಟವಾಗಿದೆ.
ಹರಿಹರ ತಾಲ್ಲೂಕಿನಲ್ಲಿ 14.5 ಮಿ.ಮೀ, ಹೊನ್ನಾಳಿಯಲ್ಲಿ 13.1 ಮಿ.ಮೀ. ದಾವಣಗೆರೆಯಲ್ಲಿ 3 ಮಿ.ಮೀ, ನ್ಯಾಮತಿಯಲ್ಲಿ 12.1 ಮಿ.ಮೀ, ಜಗಳೂರಿನಲ್ಲಿ 5 ಮಿ.ಮೀ ಮಳೆಯಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top