ದಾವಣಗೆರೆ: ದಾವಣಗೆರೆ ತಾಲೂಕಿನ 220/66/11 ಕೆ.ವಿ. ದಾವಣಗೆರೆ ಎಸ್.ಆರ್.ಎಸ್. ಸ್ವೀಕರಣಾ ವಿದ್ಯುತ್ ಕೇಂದ್ರದಲ್ಲಿ 11 ಕೆ.ವಿ. ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಮೇ 21 ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಶಾಮನೂರು, ಜೆ.ಎಚ್ ಪಟೇಲ್ ಬಡಾವಣೆ, ಡಾಲರ್ಸ್ ಕಾಲೋನಿ, ಶಿವಪಾರ್ವತಿ ಬಡಾವಣೆ, ರಾಸ್ತಾ ಹೋಟೆಲ್ ಸುತ್ತಮುತ್ತಲಿನ ಪ್ರದೇಶಗಳು., ಬೆಳವನೂರು, ತುರ್ಚಗಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಪಾಮೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. , ಹಳೇಕುಂದವಾಡ, ಹೊಸಕುಂದವಾಡ, ಕೆ.ಹೆಚ್.ಬಿ, ರಶ್ಮಿ ಶಾಲೆ ಸುತ್ತಮುತ್ತ, ಸರ್ಕಾರಿ ನೌಕರರ ಬಡಾವಣೆ, ಗ್ಲಾಸ್ ಹೌಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಶಿರಮಗೊಂಡನಹಳ್ಳಿ, ನಾಗನೂರು, 6ನೇ ಮತ್ತು 7ನೇ ಮೈಲಿಕಲ್ಲು, ಹಳೇಬಿಸಲೇರಿ, ಹೊಸಬಿಸಲೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಹದಡಿ, ತೋಳಹುಣಸೆ, ಕುಕ್ಕುವಾಡ, ನಾಗನೂರು, ಜರಿಕಟ್ಟೆ, ಬಾರ್ ಲೈನ್ ರೋಡ್, ಕಾಯಿಪೇಟೆ, ಸುಲ್ತಾನ್ ಪೇಟೆ, ಹೊಂಡದ ಸರ್ಕಲ್ ಸುತ್ತಮುತ್ತ, ಜಾಲಿನಗರ, ಟೀಚರ್ಸ್ ಕಾಲೋನಿ, EWS ಕಾಲೋನಿ, ತಳವಾರ್ ಕೇರಿ, ದೇವರಾಜ್ ಅರಸ್ ಬಡಾವಣೆ ಬಿ ಮತ್ತು ಸಿ ಬ್ಲಾಕ್, ಎಸ್.ಪಿ ಆಫೀಸ್, RTO ಆಫೀಸ್, ಕೊಂಡಜ್ಜಿ ರೋಡ್ ಹಾಗೂ ಶಿವಾಜಿ ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.



