ದಾವಣಗೆರೆ: ಈ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಂಜೆ 5 ಗಂಟೆ ವರೆಗೆ ವಿದ್ಯುತ್ ವ್ಯತ್ಯಯ; ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
1 Min Read

ದಾವಣಗೆರೆ: 220 ಕೆವಿ ಎಎಸ್.ಆರ್.ಎಸ್. ಕವಿಪ್ರನಿನಿ ಚಿತ್ರದುರ್ಗ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾಕಾಮಗಾರಿ ಹಮ್ಮಿಕೊಂಡಿದ್ದು, ಜ.28ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಚಿತ್ರದುರ್ಗದಿಂದ ವಿದ್ಯುತ್‌ ಸರಬರಾಜು ಆಗುವ ಜಗಳೂರು ಮತ್ತು ಬಿದರಕೆರೆ ವಿ.ವಿ. ಕೇಂದ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಎನ್.ಜೆ.ವೈ. ಮತ್ತು ಐ.ಪಿ. ಮಾರ್ಗಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಪಲ್ಲಾಗಟ್ಟೆ ವಿದ್ಯುತ್ ಕೇಂದ್ರ ವ್ಯಾಪ್ತಿ ಭಾಗದ ಗ್ರಾಮಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎಂದು ಪಲ್ಲಾಗಟ್ಟೆ, ಮರಕುಂಟೆ, ಉರ್ಲುಕಟ್ಟೆ ಸೇರಿದಂತೆ ವಿವಿಧ ಹಳ್ಳಿಗಳ ನೂರಾರು ರೈತರು ವಿದ್ಯುತ್ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸರ್ಕಾರ ನಿಗದಿಪಡಿಸಿರುವ 7 ಗಂಟೆ ವಿದ್ಯುತ್‌ ಸೌಲಭ್ಯ ಸರಿಯಾಗಿ ನೀಡುತ್ತಿಲ್ಲ. ಒಂದು ದಿನ ಕೊಡುವುದು ಮತ್ತೆ ಇನ್ನೊಂದು ದಿವಸ ಲೈನ್ ಟ್ರಬಲ್ ಇದೆ ಎಂದು ವಿದ್ಯುತ್ ಕೊಡುತ್ತಿಲ್ಲ. ಕಳಪೆ ವಿದ್ಯುತ್‌ನಿಂದಾಗಿ ಅನೇಕ ಮೋಟಾರ್‌ಗಳು ನೀರೆತ್ತುತ್ತಿಲ್ಲ. ಕೆಲವು ಮೋಟರುಗಳು ಸುಟ್ಟುಹೋಗಿವೆ, ಸ್ಟಾರ್ಟರ್‌ಗಳು ಸಹ ಸುಟ್ಟುಹೋಗಿವೆ ರೈತ ಮುಖಂಡ ಮರುಕುಂಟೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಒಂದು ಕಡೆ ಅಡಕೆ, ಮೆಕ್ಕೇಜೋಳ, ರಾಗಿ ಸೇರಿದಂತೆ ಹಿಂಗಾರು ಬೆಳೆಗಳಿಗೆ ನೀರು ತೊಂದರೆಯಾಗಿದ. ಇನ್ನೊಂದೆಡೆ ಅನೇಕ ಕೆರೆ- ಕಟ್ಟೆಗಳು ನೀರು ತುಂಬಿ ತುಳುಕಿದ್ದರಿಂದ ರೈತರು ಬೆಳೆ ಬೆಳೆಯಲು ಉತ್ಸಹಕರಾಗಿದ್ದ ನಮಗೆ ಸಮರ್ಪಕ ವಿದ್ಯುತ್ ನೀಲ್ಲದೇ ಬೆಳೆಗಳನ್ನು ಉಳಿಸಿಕೊಳ್ಳಲು ಪರಿತಪಿಸುವಂತಾಗಿದೆ. ಕ್ಷೇತ್ರದ ಶಾಸಕ ಬಿ.ದೇವೇಂದ್ರಪ್ಪ ಅವರು ಇತ್ತ ಗಮನಹರಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಸಂದರ್ಭ ರೈತರರಾದ ಉರ್ಲುಕಟ್ಟೆ ಲಿಂಗನಗೌಡ, ಎಸ್.ವಿ.ತಿಪ್ಪೇಸ್ವಾಮಿ, ಬಸವರಾಜ್, ಪ್ರವೀಣ್, ಸಿದ್ದೇಶ್, ದಿದ್ದಿಗಿ ರಾಜು, ಉರ್ಲುಕಟ್ಟೆ ರವಿಕುಮಾರ್, ಬಸವರಾಜ್, ಸಿದ್ದೇಶ್ ಸೇರಿದಂತೆ ಮರುಕುಂಟೆ, ದಿದ್ದಿಗಿ, ಮರುಕುಂಟೆ, ಉರ್ಲುಕಟ್ಟೆ ಸೇರಿದಂತೆ ವಿವಿಧ ಹಳ್ಳಿಗಳ ನೂರಾರು ರೈತರು ಇದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *