Connect with us

Dvgsuddi Kannada | online news portal | Kannada news online

ದಾವಣಗೆರೆ: ಇಂದು ಕೆಲವಡೆ ವಿದ್ಯುತ್ ವ್ಯತ್ಯಯ ; ಬಿರು ಗಾಳಿಗೆ ಮುರಿದು ಬಿದ್ದ ಕಂಬ- ಕೊಂಡಜ್ಜಿ ಗ್ರಾಮ ಸುತ್ತಮುತ್ತ ಇಡೀ ರಾತ್ರಿ ವಿದ್ಯುತ್ ಕಡಿತ

ದಾವಣಗೆರೆ

ದಾವಣಗೆರೆ: ಇಂದು ಕೆಲವಡೆ ವಿದ್ಯುತ್ ವ್ಯತ್ಯಯ ; ಬಿರು ಗಾಳಿಗೆ ಮುರಿದು ಬಿದ್ದ ಕಂಬ- ಕೊಂಡಜ್ಜಿ ಗ್ರಾಮ ಸುತ್ತಮುತ್ತ ಇಡೀ ರಾತ್ರಿ ವಿದ್ಯುತ್ ಕಡಿತ

ದಾವಣಗೆರೆ; ದಾವಣಗೆರೆ ನಗರದಲ್ಲಿ 24*7 ಜಲಸಿರಿ ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ಏಪ್ರಿಲ್ 20 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಎಫ್-10 ಸಿ.ಜಿ.ಹೆಚ್ ಫೀಡರ್ ವ್ಯಾಪ್ತಿಯ ವಿನೋಬ 2ನೇ ಮೇನ್, ಹಳೆ ರೆಡ್ಡಿ ಬಿಲ್ಡಿಂಗ್, ಚರ್ಚ್ ರಸ್ತೆ, ರೆಸಿಡೆನ್ಸಿ, ಜಯದೇವ ಶಾಲೆ, ಮಸೀದಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಇನ್ನೂ ಹರಿಹರ ತಾಲ್ಲೂಕಿನ ಕೊಂಡಜ್ಜಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿರು ಗಾಳಿ, ಗುಡುಗು, ಸಿಡಿಲು ಸಹಿತ ನಿನ್ನೆ (ಏ.19) ಸಂಜೆ ಭಾರಿ ಮಳೆಯಾಗಿದೆ. ಸುಂಟರಗಾಳಿಗೆ ಮರಗಳು, ಮನೆ ತಗಡುಗಳು ಹಾರಿ ಹೋಗಿವೆ. ಮರಗಳು ವಿದ್ಯುತ್ ಕಂಬ ಮೇಲೆ ಬಿದ್ದ ಪರಿಣಾಮ ಕರುಬರಹಳ್ಳಿ, ಕೆಂಚನಹಳ್ಳಿ, ಬುಳ್ಳಾಪುರ, ಕೊಂಡಜ್ಜಿ ಗ್ರಾಮಲ್ಲಿ ಇಡೀ ರಾತ್ರಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದುವರೆಗೂ ಕರೆಂಟ್ ಬಂದಿಲ್ಲ. ಅನೇಕ ಕಡೆ ವಿದ್ಯುತ್ ಕಂಬಗಳು ಮುರಿದು ನೆಲಕ್ಕೆ ಬಿದ್ದಿದ್ದು, ವಿದ್ಯುತ್ ಸಂಪರ್ಕ ತಡವಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top