Connect with us

Dvgsuddi Kannada | online news portal | Kannada news online

ದಾವಣಗೆರೆ: ಚುನಾವಣೆ ಠೇವಣಿಗಾಗಿ 25 ಸಾವಿರ 10 ರೂ. ನಾಣ್ಯ ಚೀಲದಲ್ಲಿ ಹೊತ್ತು ತಂದ ಅಭ್ಯರ್ಥಿ…!!!; ಅಧಿಕಾರಿಗಳಿಗೆ ಅಚ್ಚರಿ…!

ದಾವಣಗೆರೆ

ದಾವಣಗೆರೆ: ಚುನಾವಣೆ ಠೇವಣಿಗಾಗಿ 25 ಸಾವಿರ 10 ರೂ. ನಾಣ್ಯ ಚೀಲದಲ್ಲಿ ಹೊತ್ತು ತಂದ ಅಭ್ಯರ್ಥಿ…!!!; ಅಧಿಕಾರಿಗಳಿಗೆ ಅಚ್ಚರಿ…!

ದಾವಣಗೆರೆ: ದಾವಣಗೆರೆ ಲೋಕಸಭೆ ಕ್ಷೇತ್ರದ ಜನಹಿತ ಪಕ್ಷದ ಅಭ್ಯರ್ಥಿ ಚುನಾವಣೆ ಠೇವಣಿಗಾಗಿ 25 ಸಾವಿರ 10 ರೂ.ನಾಣ್ಯಗಳನ್ನು ಚೀಲದಲ್ಲಿ ತಂದು ಅಚ್ಚರಿ ಮೂಡಿಸಿದರು. 10 ರೂ. ನಾಣ್ಯಗಳ ಜನಜಾಗೃತಿಗಾಗಿ ತಂದಿರುವುದಾಗಿ ಅಭ್ಯರ್ಥಿ ಹೇಳಿದ್ದು, ಅಧಿಕಾರಿಗಳು ಅನಿವಾರ್ಯವಾಗಿ 10 ರೂ. ನಾಣ್ಯಗಳನ್ನು ಸ್ವೀಕರಿಸಿ ಎರಡ್ಮೂರು ಬಾರಿ ಎಣಿಸುವಷ್ಟರಲ್ಲಿ  ಸುಸ್ತಾದರು.

ಹತ್ತು ರೂ.ಗಳ ಚಲಾವಣೆಯಲ್ಲಿದೆ ಎಂಬ ಜಾಗೃತಿ ಮೂಡಿಸಲು ನಾಣ್ಯಗಳನ್ನು ಸಂಗ್ರಹಿಸಿ ಠೇವಣಿಯಾಗಿ ನೀಡಿದ್ದೇನೆ ಎಂದು ಜನಹಿತ ಪಕ್ಷದ ಅಭ್ಯರ್ಥಿ ದೊಡ್ಡೇಶ್ ಹೇಳಿದ್ದಾರೆ. ಚುನಾವಣೆ ಸ್ಪರ್ಧಾ ಠೇವಣಿ 25 ಸಾವಿರ ರೂ.ಗಳನ್ನು 10 ರೂ.ಗಳ ನಾಣ್ಯ ರೂಪದಲ್ಲಿ ನೀಡದ್ದು, ನಾಣ್ಯದ ಚೀಲವನ್ನು ಹೊತ್ತು ತಂದು ನಾಮಪತ್ರ ಸಲ್ಲಿಸಿದರು. ನಾಣ್ಯ ಕಂಡು ಚುನಾವಣ ಸಿಬಂದಿ ಒಮ್ಮೆ ಹೌಹಾರಿದರು. ಬಳಿಕ ಎರಡ್ಮೂರು ಬಾರಿ ಎಣಿಸಿ ಲೆಕ್ಕ ಪಡೆದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top