Connect with us

Dvgsuddi Kannada | online news portal | Kannada news online

ದಾವಣಗೆರೆ: ಇಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

ದಾವಣಗೆರೆ

ದಾವಣಗೆರೆ: ಇಂದು ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

ದಾವಣಗೆರೆ:  ಯರಗುಂಟ ವಿದ್ಯುತ್ ವಿತರಣಾ ಕೇಂದ್ರದ ವಿಜಯನಗರ ಮತ್ತು ಎಸ್‍ಜೆಎಂ ಮಾರ್ಗದ ಜಲಸಿರಿ (24*7) ಯೋಜನೆ ಮತ್ತು ದಾವಣಗೆರೆ ಸ್ಮಾರ್ಟ್‍ಸಿಟಿ ಲಿಮಿಟೆಡ್ ಯೋಜನೆಯಡಿ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿ ನಿರ್ವಹಿಸುತ್ತಿರುವುದರಿಂದ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾ. 6 ರಂದು ಬೆಳಿಗ್ಗೆ 10.30 ರಿಂದ ಸಂಜೆ 4.30 ವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಎಫ್08-ವಿಜಯನಗರ ಮಾರ್ಗದ ದೇವರಾಜ್ ಅರಸ್ ಬಡಾವಣೆ ‘ಬಿ’ ಬ್ಲಾಕ್ ಮತ್ತು ‘ಸಿ’ ಬ್ಲಾಕ್, ಎಸ್‍ಪಿ ಆಫೀಸ್, ಆರ್‍ಟಿಓ ಆಫೀಸ್, ವಿಜಯನಗರ ಬಡಾವಣೆ, ರಾಜೀವ ಗಾಂಧಿ ಬಡಾವಣೆ, ಎಸ್‍ಪಿಎಸ್ ನಗರ 2ನೇ ಹಂತ, ಎಸ್‍ಎಮ್‍ಕೆ ನಗರ, ವಾಲ್ಮೀಕಿ ಸರ್ಕಲ್ ಸುತ್ತಮುತ್ತ ಶಿವಾಲಿ ಚಿತ್ರ ಮಂದಿರದ ಅಕ್ಕ ಪಕ್ಕ ಹಾಗೂ ಟೀಚರ್ಸ್ ಕಾಲೋನಿ ಇತರೆ ಪ್ರದೇಶಗಳು.

ಎಫ್16-ಎಸ್‍ಜೆಎಂ ಮಾರ್ಗದ ಕೊಂಡಜ್ಜಿ ರಸ್ತೆ, ಎಸ್‍ಜೆಎಮ್ ನಗರ, ಸೇವಾದಳ ಕಾಲೋನಿ, ಹೊಸಕ್ಯಾಂಪ್, ಎಸ್‍ಎಂಕೆ ನಗರ 2ನೇ ಹಂತ, ವೀರಾಂಜನೇಯ ಪೆಟ್ರೋಲ್ ಬಂಕ್ ಹತ್ತಿರ, ಬಿ.ಜೆ.ಎಂ ಸ್ಕೂಲ್, ಆರ್‍ಟಿಓ ಆಫೀಸ್, ಬೂದಿಹಾಳ್ ರಸ್ತೆ, ಬಾಬು ಜಗಜೀವನ್‍ರಾಮ್ ನಗರ, ಗೌರಸಂದ್ರ ಮಾರಮ್ಮ ದೇವಸ್ಥಾನದ ಸುತ್ತಮುತ್ತ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್

ಡಿ.ಸಿ.ಎಂ ಫೀಡರ್‍ನಲ್ಲಿ ಬೆಸ್ಕಾಂ ವತಿಯಿಂದ ತುರ್ತು ಕಾರ್ಯ  ಹಮ್ಮಿಕೊಂಡಿರುವುದರಿಂದ ರಾಜೇಂದ್ರ ಬಡಾವಣೆ, ಜಯನಗರ ‘ಬಿ’ ಬ್ಲಾಕ್, ಬನಶಂಕರಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ10 ಗಂಟೆಯಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top