ದಾವಣಗೆರೆ: ಪ್ರಧಾನಮಂತ್ರಿ ವಸತಿ ಯೋಜನೆಯಡಿ ಜಿಲ್ಲೆಯಲ್ಲಿ 3,376 ಮನೆಗಳು ಮಂಜೂರಾಗಿವೆ. ಈ ಪೈಕಿ 2,637 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 959 ಅಲ್ಪಸಂಖ್ಯಾತ ಫಲಾನುಭವಿ ಗಳನ್ನು ಯೋಜನೆಯಡಿ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ ನೀಡಿದರು.
ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ನಾಲ್ಕು ಮದರಸಾಗಳ ಅಭಿವೃದ್ಧಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 2 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.
ಜನರಿಗಾಗಿ ಮನೆ, ಮನಸು ಯಾವಗಲೂ ತೆರೆದಿರುತ್ತೆ; ನಾನು ಸಹ ಅಜ್ಜನಂತೆ ಅಜಾತಶತ್ರು ಆಗುತ್ತೇನೆ; ಶಾಸಕ ಸಮರ್ಥ್ ಶಾಮನೂರು
ಈ ಹಿಂದೆ ಮದರಸಾಗಳ ಅಭಿವೃದ್ಧಿಗೆ 5 ಲಕ್ಷ ಅನುದಾನ ನೀಡಲಾಗುತ್ತಿತ್ತು. ಈ ವರ್ಷದಿಂದ ಅನುದಾನವಾನ್ನು 50 ಲಕ್ಷಕ್ಕೆ ಹೆಚ್ವಿಸಿಸಲಾಗಿದೆ. ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ತಲಾ 50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಜಿಲ್ಲಯ ಯಾವ ಮದರಸಾಗಳಿಗೆ ಅನುದಾನ..?
- ಚನ್ನಗಿರಿಯ ಫೈಜ್ ಆಮ್ ಮದನಿಯಾ
- ಹೊನ್ನಾಳಿ ಹುಣಸಘಟ್ಟದ ಜಾಮಿಯಾ
- ಯೂಸೆಫ್ ಜಿಯಾವುಲ್ಲಾ ಉಲೂಮ್
- ದಾವಣಗೆರೆ ಮಗಾನಹಳ್ಳಿಯ ಖುದಾಯಿಜುಲ್ ಖುಬ್ರಾ ಮತ್ತು ಮುಸ್ತಾಪ ನಗರದ ದಾರೂಲ್ ಉಲುಮ್ ರಝಾ ವುಲ್ ಮುಸ್ತಪಾ ಬರ್ಕತಿಯಾ ದಾರೂಲ್ ಮದರಸಾ
ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಎಎಸ್ಪಿ ಪರಮೇಶ್ವರ ಹೆಗಡೆ, ಮಹಾನಗರ ಪಾಲಿಕೆ ಆಯುಕ್ತೆ ಮಮತಾ ಗೌಡರ್, ಡಿಡಿಪಿಐ ಕೊಟ್ರೇಶ್ ಇದ್ದರು.



