Connect with us

Dvgsuddi Kannada | online news portal | Kannada news online

ಸೋತವರಿಗೆ ಸಚಿವ ಸ್ಥಾನ ನೀಡುವುದಾದರೆ, ನಾವು ಎಲ್ಲಿಗೆ ಹೋಗಬೇಕು: ರೇಣುಕಾಚಾರ್ಯ  ಕಿಡಿ

Home

ಸೋತವರಿಗೆ ಸಚಿವ ಸ್ಥಾನ ನೀಡುವುದಾದರೆ, ನಾವು ಎಲ್ಲಿಗೆ ಹೋಗಬೇಕು: ರೇಣುಕಾಚಾರ್ಯ  ಕಿಡಿ

ದಾವಣಗೆರೆ:  ಸೋತವರಿಗೆ ಸಚಿವ ಸ್ಥಾನ ನೀಡುವುದಾದರೆ, ನಾವು ಎಲ್ಲಿಗೆ ಹೋಗಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.  ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಪರೋಕ್ಷವಾಗಿ ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದ ಶಾಸಕ ರೇಣುಕಾಚಾರ್ಯ, ಸಿಪಿ ಯೋಗೆಶ್ವರ್  ಗೆ ಸಚಿವ ಸ್ಥಾನ ನೀಡವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಸಮ್ಮಿಶ್ರ ಸರ್ಕಾರ ಬೀಳಸಿ ಬಿಜೆಪಿ ಸರ್ಕಾರ ರಚನೆಯಾಗಲೂ ಸಹಕರಿಸಿದವರಿಗೆ ಮಾತ್ರ ಸಚಿವ ಸ್ಥಾನ ನೀಡಬೇಕು. ಜನರಿಂದ ನೇರವಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡಿ.  ಸೋತವರಿಗೆ ಸಚಿವ ಸ್ಥಾನ ನೀಡೊದಕ್ಕೆ ನನ್ನ ವಿರೋಧವಿದೆ ಎಂದರು.

ನಾವು ಜಾರಕಿಹೊಳಿ ಮನೆಯಲ್ಲಿ ಸಭೆ ಸೇರಿದ್ದು ಸಿಪಿವೈಗೆ ಸಚಿವ ಸ್ಥಾನ ತಪ್ಪಿಸಲು ಅಲ್ಲ. ನಾವು ಸೇರಿದ್ದ ಬೇರೆ ಉದ್ದೇಶಕ್ಕಾಗಿ ಎಂದ ಅವರು, ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ. ದಾವಣಗೆರೆ ಮಧ್ಯ ಕರ್ನಾಟಕ. ದಾವಣಗೆರೆ ರಾಜಧಾನಿ ಆಗೋ ಅರ್ಹತೆ ಇದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹೈದ್ರಾಬಾದ್ ಕರ್ನಾಟಕ ಸಂಪರ್ಕ ಸೇತುವೆ. ಹೀಗಾಗಿ ಪ್ರಾದೇಶಿಕ ಸಮತೋಲನ ಆಧಾರದ ಮೇಲೆ ದಾವಣಗೆರೆ ಸಚಿವ ಸ್ಥಾನ ನೀಡಬೇಕು ಎಂದು ತಿಳಿಸಿದರು.

ಬ್ಯಾಂಡ್ ಬಾರಿಸಿ ತಮಟೆ ಬಡೆದು ಬಾಯಿ ಬಡೆದುಕೊಂಡರೆ ಯಾರಿಗೂ ಸಚಿವ ಸ್ಥಾನ ಸಿಗಲ್ಲ. ರಾಜಕೀಯವಾಗಿ ನಾವು ಯಾರು ಸನ್ಯಾಸಿಗಳಲ್ಲ. ಎಲ್ಲರೂ ಒಗ್ಗಟ್ಟಾಗಿ ಜಿಲ್ಲೆಗೆ ಸಚಿವ ಸ್ಥಾನ ಬೇಕು ಅಂತ ಕೇಳಿದ್ದೇವೆ. ಮೂರು ಬಾರಿ ಶಾಸಕ ಆಗಿ ಆಯ್ಕೆಯಾಗಿದ್ದೇನೆ, ಜನರ ಆಸೆ ಕೂಡ ಇದೆ ಸಚಿವನಾಗಬೇಕು ಅನ್ನೋದು ಇದೆ.  ಸಿಎಂ ಯಾವುದೇ ನಿರ್ಧಾರ ತಗೊಂಡರೂ ನಾವು ಬದ್ದರಾಗಿದ್ದೇವೆ.  ಈ ಬಗ್ಗೆ ಹಾದಿ- ಬೀದಿ ರಂಪ ಮಾಡುವುದು ನಮಗೆ ಇಷ್ಟ ಇಲ್ಲ ಎಂದು ಹೇಳಿದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in Home

To Top
(adsbygoogle = window.adsbygoogle || []).push({});