Connect with us

Dvgsuddi Kannada | online news portal | Kannada news online

ವಿಶೇಷ ಅನುದಾನದಲ್ಲಿ ಬನಶಂಕರಿ ಬಡಾವಣೆಯ ಅಭಿವೃದ್ದಿಗೆ ಆದ್ಯತೆ: ಮೇಯರ್ ಅಜಯ್ ಕುಮಾರ್

ದಾವಣಗೆರೆ

ವಿಶೇಷ ಅನುದಾನದಲ್ಲಿ ಬನಶಂಕರಿ ಬಡಾವಣೆಯ ಅಭಿವೃದ್ದಿಗೆ ಆದ್ಯತೆ: ಮೇಯರ್ ಅಜಯ್ ಕುಮಾರ್

ಡಿವಿಜಿ ಸುದ್ದಿ, ದಾವಣಗೆರೆ: ಅನೇಕ ವರ್ಷಗಳಿಂದ ಬನಶಂಕರಿ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕಂಡು ಬರುತ್ತಿದೆ.  ಈ ಹಿನ್ನೆಲೆಯಲ್ಲಿ ಇಂದು ಬಡಾವಣೆಗೆ ಭೇಟಿ ನೀಡಿದ್ದು, ಬಡಾವಣೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಬದ್ಧವಾಗಿದ್ದೇನೆ ಎಂದು ಮೇಯರ್ ಬಿ.ಜಿ ಅಜಯ್ ಕುಮಾರ್ ಹೇಳಿದರು.

ಬನಶಂಕರಿ ಬಡಾವಣೆ ರಸ್ತೆ, ಯುಜಿಡಿ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬಡಾವಣೆಯ ಜನರಿಗೆ ಸಾಕಷ್ಟು ತೊಂದರೆಯಾಗಿದೆ ಈ ಬಗ್ಗೆ ಇಲ್ಲಿನ ನಿವಾಸಿಗಳು ಸಮಸ್ಯೆ ನಿವಾರಣೆಗೆ ಮನವಿ ಸಲ್ಲಿಸಿದ್ದಾರೆ. ಬಡಾವಣೆಯಲ್ಲಿ ಸೌಲಭ್ಯಗಳು ಸಮರ್ಪಕವಾಗಿಲ್ಲ, ಹೀಗಾಗಿ  ಇಂಜಿನಿಯರ್‌ಗಳನ್ನು ಕರೆಯಿಸಿ ಪರಿಶಿಲನೆ ನಡೆಸಿ ಅಭಿವೃದ್ದಿ ಮಾಡಲಾಗುವುದು ಎಂದು ತಿಳಿಸಿದರು.

ಬಡಾವಣೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೆಳೆದಿದೆ.  ಮೂರು ಹೈವೆ ರಸ್ತೆ ಈ ಭಾಗಕ್ಕೆ ಸಂಪರ್ಕ ಕಲ್ಪಿಸುತ್ತಿದೆ. ಡಾಂಬರೀಕರದ ಅಗತ್ಯವಿದೆ. ಮೊದಲು ಜನಸಂಖ್ಯೆ ಕಡಿಮೆಯಿದ್ದ ಕಾರಣ ಚಿಕ್ಕ ಯುಜಿಡಿ ಪೈಪ್ ಲೈನ್ ಮಾಡಲಾಗಿತ್ತು. ಈಗ  ಬಡಾವಣೆ ಸಾಕಷ್ಟು ಅಭಿವೃದ್ದಿ ಕಂಡಿದೆ.ಅದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಯುಜಿಡಿ ಪೈಪ್ ಲೈನ್ ಅಳವಡಿಸುವ ಅಗತ್ಯವಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

ಬಡಾವಣೆಯ ಕೆಲ ರಸ್ತೆಗಳು ಡಾಂಬರೀಕರಣವಾಗದ ಕಾರಣ ಮಳೆಬಂದರೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವಿಶೇಷ ಅನುದಾನದಲ್ಲಿ ಬನಶಂಕರಿ ಬಡಾವಣೆಯ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು.ಅತೀ ಶೀಘ್ರದಲ್ಲೇ ಸಂಸದರು ಹಾಗೂ ಶಾಸಕರ ಗಮನಕ್ಕೆ ತಂದು ವಿಶೇಷ ಅನುದಾನ ಕಲ್ಪಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top
(adsbygoogle = window.adsbygoogle || []).push({});