Connect with us

Dvgsuddi Kannada | online news portal | Kannada news online

ದಾವಣಗೆರೆ: ಲಂಚ ಸ್ವೀಕರಿಸುವಾಗಲೇ ಎಸಿಬಿ ಬಲೆಗೆ ಬಿದ್ದ ಹರಿಹರ ನಗರಸಭೆ ಬಿಲ್ ಕಲೆಕ್ಟರ್

ದಾವಣಗೆರೆ

ದಾವಣಗೆರೆ: ಲಂಚ ಸ್ವೀಕರಿಸುವಾಗಲೇ ಎಸಿಬಿ ಬಲೆಗೆ ಬಿದ್ದ ಹರಿಹರ ನಗರಸಭೆ ಬಿಲ್ ಕಲೆಕ್ಟರ್

ದಾವಣಗೆರೆ: ಲಂಚ ಸ್ವೀಕರಿಸುವಾಗಲೇ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಹರಿಹರ ನಗರಸಭೆ ಬಿಲ್ ಕಲೆಕ್ಟರ್ ಬಿದಿದ್ದಾರೆ.

ಹರಿಹರದ ಹರ್ಲಾಪುರದ ಗ್ರಾಮದ ರಾಘವೇಂದ್ರ ಎಂಬುವರ ನಿವೇನದ ಖಾತೆ ಬದಲಾವಣೆ ಹಾಗೂ ಕಂದಾಯ ರಶೀದಿ ನೀಡಲು  ಹರಿಹರ ನಗರಸಭೆಯ ಬಿಲ್ ಕಲೆಕ್ಟರ್ ಮಂಜುನಾಥ್ 1.50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 1 ಲಕ್ಷ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಈ ಬಗ್ಗೆ ರಾಘವೇಂದ್ರ  ಎಸಿಬಿ ದೂರು ನೀಡಿದ್ದರು. ರಾಘವೇಂದ್ರ ಅವರಿಂದ ಲಂಚ ಸ್ವೀಕರಿಸುವಾಲೇ ಮಂಜುನಾಥ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಹರಿಹರ ನಗರಸಭೆಯ ಎದುರಿನ ಶಿವ ಗಾರ್ಡನ್‌ ರೆಸ್ಟೋರೆಂಟ್ ನಲ್ಲಿ 1.00,000 ರೂ. ಹಣ ಪಡೆಯುತ್ತಿದ್ದರು. ಕಾರ್ಯಾಚರಣೆಯಲ್ಲಿ ಪೂರ್ವ ವಲಯ ಎಸಿಬಿ ಕಲಾ ಕೃಷ್ಣಸ್ವಾಮಿ, ಮಾರ್ಗದರ್ಶನದಂತೆ, ಡಿಎಸ್‌ಪಿ ಮಂಜುನಾಥ್, ಪಿಐ ಮಧುಸೂಧನ್, ರವೀಂದ್ರ ಕುರುಬಗಟ್ಟಿ ಹಾಗೂ ದಾವಣಗೆರೆ ಎಸಿಬಿ ಠಾಣೆಯ ಸಿಬ್ಬಂದಿ ಉಮೇಶ್ ಎಸ್. ಆಂಜನೇಯ ವಿ.ಹೆಚ್, ವೀರೇಶಪ್ಪ, ಕಲ್ಲೇಶ್ವರಪ್ಪ, ಧನರಾಜ್, ಮೋಹನ್ ಕುಮಾರ್, ಬಸವರಾಜ್ ಸಿ.ಎಸ್. ವಿನಾಯಕ ಕಟೀಗರ್, ನಾಗರಾಜ್ ಪಾಲ್ಗೊಂಡಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top