Connect with us

Dvgsuddi Kannada | online news portal | Kannada news online

ದಾವಣಗೆರೆಯಲ್ಲಿ13 ಅನಧಿಕೃತ ದೇವಸ್ಥಾನ; ತೆರವಿಗೆ ದೇವಸ್ಥಾನ ಪ್ರಮುಖರ ಜತೆ ಚರ್ಚಿಸಿ ತೀರ್ಮಾನ: ಜಿಲ್ಲಾಧಿಕಾರಿ

Davanagere DC mahantesh bilagi

ದಾವಣಗೆರೆ

ದಾವಣಗೆರೆಯಲ್ಲಿ13 ಅನಧಿಕೃತ ದೇವಸ್ಥಾನ; ತೆರವಿಗೆ ದೇವಸ್ಥಾನ ಪ್ರಮುಖರ ಜತೆ ಚರ್ಚಿಸಿ ತೀರ್ಮಾನ: ಜಿಲ್ಲಾಧಿಕಾರಿ

ದಾವಣಗೆರೆ: ಸುಪ್ರೀಂ ಕೋಟ್  ಅನಧಿಕೃತ ದೇವಸ್ಥಾನ ತೆರವುಗೊಳಿಸುವಂತೆ ಆದೇಶ ನೀಡಿದ್ದು,  ಜಿಲ್ಲೆಯಲ್ಲಿ  24 ಅನಧಿಕೃತ ದೇವಸ್ಥಾನಗಳಿವೆ.  ಇವುಗಳಲ್ಲಿ ಈಗಾಗಲೇ 13 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.  ಇನ್ನುಳಿದ ಹನ್ನೊಂದು ಕಟ್ಟಡ ತೆರವುಗೊಳಿಸುವ ಕುರಿತು ದೇವಸ್ಥಾನಗಳ ಪ್ರಮುಖರ ಜೊತೆ ಮಾತನಾಡಿ ತೆರವುಗೊಳಿಸಸುತ್ತೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸ್ಥಳ, ಪಾರ್ಕ್,ರಸ್ತೆಯಲ್ಲಿ ಅನಧಿಕೃತವಾಗಿ  ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ಹಾಗೂ ಗೃಹ ಇಲಾಖೆಯ ಆದೇಶಿಸಿದೆ. ಈ  ಬಗ್ಗೆ 20 ದಿನಗಳ ಕಾಲ ಸಮಯಾವಕಾಶ ನೀಡಲಾಗಿದೆ.   ಹೀಗಾಗಿ 2009ಕ್ಕಿಂತ ಮುಂಚೆ ಅನಧಿಕೃತವಾಗಿ ಕಟ್ಟಲಾಗಿರುವ ಕಟ್ಟಡಗಳ ತೆರವು ಮಾಡಲಾಗುವುದು. ಜಿಲ್ಲೆಯ ಅನಧಿಕೃತ ಕಟ್ಟಡ ತೆರವಿನ ಬಗ್ಗೆ  ದೇವಸ್ಥಾನಗಳ ಪ್ರಮುಖರ ಜೊತೆ ಮಾತನಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ.  ಸಕ್ರಮಗೊಳಿಸಲು ಅವಕಾಶವಿದ್ದರೆ ಸಕ್ರಮಗೊಳಿಸುತ್ತೇವೆ ಎಂದು ತಿಳಿಸಿದರು.

ದಾವಣಗೆರೆಯಲ್ಲಿ 7, ಚನ್ನಗಿರಿ ಹಾಗೂ ಹರಿಹರದಲ್ಲಿ ತಲಾ 2 ದೇವಸ್ಥಾನಗಳು ಅನಧಿಕೃತವಾಗಿದ್ದು,   60ರಿಂದ 70 ವರ್ಷಗಳ ಹಳೆಯದಾದ ದೇಗುಲಗಳು ಇವಾಗಿವೆ. ಸೆ. 20ರೊಳಗೆ  ವರದಿ ‌ನೀಡುವಂತೆ ಆಯಾ ತಾಲೂಕು ಆಡಳಿತಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.

 

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top