ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ ಮಾರ್ಗದ ಸರ್ವಿಸ್ (ಸೇವಾ ರಸ್ತೆ) ಗಳನ್ನು ಏಳು ತಿಂಗಳೊಳಗೆ ನಿರ್ಮಾಣ ಮಾಡುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಂಸದರಾದ ಜಿ.ಎಂ ಸಿದ್ದೇಶ್ವರ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಹರಿಹರ ವರೆಗಿನ ಹೆದ್ದಾರಿ ವ್ಯಾಪ್ತಿಯ ಸೇವಾ ರಸ್ತೆಗಳ ನಿರ್ಮಾಣ, ಹೈವೋಲ್ಟೇಜ್ ಲೈನ್ನಗಳ ಸ್ಥಳಾಂತರ ಹಾಗೂ ಮೇಲ್ಸೇತುವೆ ಕೆಳಭಾಗದಲ್ಲಿ ನೀರು ನಿಲುಗಡೆ ಶಾಶ್ವತ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಏಳು ತಿಂಗಳ ಒಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ನಾಳೆಯಿಂದಲೇ ಸೇವಾ ರಸ್ತೆಗಳ ಕಾಮಗಾರಿ ಪ್ರಾರಂಭಿಸುವಂತೆ ಸೂಚನೆ ನೀಡಿದರು.
ನೀರ್ಥಡಿ ಯಿಂದ ಹದಡಿಯವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೂ ಬಾಕಿ ಇರುವ ಸರ್ವಿಸ್ ರಸ್ತೆಗಳನ್ನು 07 ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಬಾತಿ-ಹರಿಹರ, ಬಾತಿ-ಕುಂದುವಾಡ ಶಾಮನೂರು ಬ್ರೀಜ್ನಿಂದ ಹದಡಿ ಕ್ರಾಸ್ವರೆಗೆ ಸೇವಾ ರಸ್ತೆಗಳ ನಿರ್ಮಾಣ ಅಪೂರ್ಣಗೊಂಡಿದೆ. ಎಲ್ಲ ಭಾಗದಲ್ಲೂ ಅರೆಬರೆ ಕೆಲಸಗಳಾಗಿವೆ. ಬನಶಂಕರಿ ಬಡಾವಣೆ ಬಳಿ ಹೈ ಟೇಷನ್ ವಿದ್ಯುತ್ ಕಂಬಗಳನ್ನು ಸಹ ಸ್ಥಳಾಂತರಿಸಿಲ್ಲ. ನಿಮ್ಮ ಕೆಲಸದಿಂದ ನಾವು ಈ ಭಾಗದಲ್ಲಿ ಸಂಚರಿಸುವಂತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು
ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಮಾಣ ಮಾಡಿರುವ ಕೆಳ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಕಷ್ಟವಾಗುತ್ತದೆ. ವಾಹನಗಳು ವೇಗವಾಗಿ ಹೋಗುವಾಗ ಹುಬ್ಬು ತಗ್ಗುಗಳಿಂದ ವಾಹನಕ್ಕೆ ತುಂಬಾ ತೊಂದರೆಯಾಗಿ ಅಪಘಾತಕ್ಕೂ ಕಾರಣವಾಗಿರುತ್ತದೆ. ಸುಲಲಿತ ವಾಹನ ಸಂಚಾರಕ್ಕೆ ವ್ಯವಸ್ಥೆ ತಕ್ಷಣವೇ ಕ್ರಮವಹಿಸಿ ಎಂದು ಹೆದ್ದಾರಿ ಪ್ರಾಧಿಕಾರದ ಅಭಿಯಂತರರಿಗೆ ಸಂಸದರು ಸೂಚಿಸಿದರು.
ಟೋಲ್ ಗೇಟ್ ನ ವಿಐಪಿ ಗೇಟ್ ಇರುವ ಲೈನ್ ನಲ್ಲಿ ಬೇರೆ ವಾಹನ ಬರುವುದರಿಂದ ವಿಐಪಿ, ಪೊಲೀಸ್, ಅಂಬ್ಯೂಲೆನ್ಸ್ ಚಲಿಸಲು ಕಷ್ಟವಾಗಿರುತ್ತದೆ. ಅಂಬ್ಯೂಲೆನ್ಸ್ ವಾಹನ ಚಲುಸಲು ಅದಕ್ಕೆ ಮುಕ್ತವಾಗಿ ಗೇಟ್ ತೆರೆಯಬೇಕೆಂದು ಸಲಹೆ ನೀಡಿದರು.ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾತಾನಾಡಿ, ಟ್ರಕ್ಗಳು ಹೊರರಸ್ತೆಯಲ್ಲಿ ಇನ್ನಿತರ ವಾಹನಗಳು ಅಂದರೆ ವೇಗವಾಗಿ ಚಲಿಸುವ ವಾಹನಗಳು ಒಳಭಾಗದಲ್ಲಿ ಚಲಿಸಬೇಕೆಂದು ಸೂಚಿಸಿದರೂ ಕೂಡ ನಿಯಮಾಪಾಲನೆ ಮಾಡುತ್ತಿಲ್ಲ. ಈ ಕಾರಣಕ್ಕಾಗಿ ಹೆಬ್ಬಾಳು ಟೋಲ್ ಗೇಟ್ಬಳಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿ ದಂಡ ವಿಧಿಸುವ ಕಾರ್ಯ ಆರಂಭಿಸಿದ್ದಾರೆ ಎಂದು ತಿಳಿಸಿದರು.
ಟೋಲ್ ಗೇಟ್ ಬಳಿ ರಾತ್ರಿ ಲಾರಿ ಡ್ರೈವರ್ಗಳು ಲಾರಿಗಳನ್ನು ನಿಲ್ಲಿಸಿ ನಿದ್ದೆ ಮಾಡುವುದರಿಂದ ಅನೇಕ ಅಪಘಾತಕ್ಕೆ ಕಾರಣವಾಗಿದೆ ಹಾಗಾಗಿ ಟೋಲ್ ಗೇಟ್ ಬಳಿ ಲಾರಿನಿಲ್ಲಿಸಲು ಅವಕಾಶ ಕೊಡಬೇಡಿ ಎಂದು ತಿಳಿಸಿದರು.
ಹೈಟೇಷನ್ ವಿದ್ಯುತ್ ಕಂಬವನ್ನು ಈ ಕೂಡಲೇ ಸ್ಥಳಾಂತರ ಮಾಡುತ್ತೇವೆ, ಶ್ಯಾಮನೂರ ಕ್ರಾಸ್ನಿಂದ ಹದಡಿ ಕ್ರಾಸ್ ವರೆಗೂ ಸೇವಾ ರಸ್ತೆಯನ್ನು ಮುಂದಿನ ಏಳು ತಿಂಗಳೊಳಗಾಗಿ ಪೂರ್ಣಗೊಳಿಸಲು ಕ್ರಮವಹಿಸುವುದಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ Iಖಅಔಓ ಗುತ್ತಿಗೆ ಸಂಸ್ಥೆಯ ದೊಡ್ಡಯ್ಯ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಆಯುಕ್ತರಾದ ವಿಶ್ವನಾಥ್ ಮುದ್ದಜ್ಜಿ, ಪಿಎನ್ಸಿ ಕಂಟ್ರಾಕ್ಟರ್ ಸತೀಶ್ದ್ಯಾನಿ, ಎ.ಸಿ ವೆಂಕಟೇಶಯ್ಯ ರಿಜಿನಲ್ ಆಫೀಸರ್ ವಾಥೋರೆ ಉಪಸ್ಥಿತರಿರುವರು.



