Connect with us

Dvgsuddi Kannada | online news portal | Kannada news online

ದಾವಣಗೆರೆ: ರುದ್ರನಕಟ್ಟೆ ಗ್ರಾಮದಲ್ಲಿ ಹಸುವಿನ ಕರು ಕೊಂದು ಹಾಕಿದ ಚಿರತೆ

IMG 20220926 155604

ದಾವಣಗೆರೆ

ದಾವಣಗೆರೆ: ರುದ್ರನಕಟ್ಟೆ ಗ್ರಾಮದಲ್ಲಿ ಹಸುವಿನ ಕರು ಕೊಂದು ಹಾಕಿದ ಚಿರತೆ

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಕಂದನಕೋವಿ ಗ್ರಾಮದ ಸುತ್ತಮುತ್ತಲಿನ ಜಮೀನೊಂದರಲ್ಲಿ ಚಿರತೆ ಪತ್ತೆಯಾಗಿದ್ದು, ಗ್ರಾಮಸ್ಥರು ಭಯಗೊಂಡಿದ್ದಾರೆ. ಸಾರ್ವಜನಿಕರು ನಿರ್ಭಯದಿಂದ ಓಡಾಟಕ್ಕೆ ತೊಂದರೆ ಉಂಟಾಗಿದೆ.‌ ನಿನ್ನೆ ತಡ ರಾತ್ರಿ ಕಂದನಕೋವಿ ಸಮೀಪದ ರುದ್ರನಕಟ್ಟೆ ಗ್ರಾಮದ ಹಸುವಿನ ಕೊಟ್ಟಿಗೆ ಮೇಲೆ ದಾಳಿ ಮಾಡಿದ ಚಿರತೆ, ಹಸುವಿನ ಕರುವನ್ನು ಕೊಂದು ಹಾಕಿದೆ.

ಇತ್ತೀಚೆಗೆ ಜಮೀನಲ್ಲಿ ನರಿಯೊಂದನ್ನು ಕೊಂದು ಹಾಕಿದ್ದ ಇದೇ ಚಿರತೆ, ಇದೀಗ ಹಸುವಿನ ಕರು ಕೊಂದು ಹಾಕಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಬೇಕೆಂದು ಕಂದನಕೋವಿ ಗ್ರಾಮ ಪಂಚಾಯತಿ ಕಾರ್ಯಾಲಯ ಅರಣ್ಯ ಇಲಾಖೆಗೆ ಕೋರಿತ್ತು.‌ ಸೆ.21 ರಂದು ಕಂದನಕೋವಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಪಾವಡರಂಗವ್ವನಹಳ್ಳಿ ರಸ್ತೆಯ ಆಲದ ಮರ‌ ಬಳಿ ಹಾಗೂ ರಾತ್ರಿ 8 ಗಂಟೆಗೆ ರುದ್ರನಕಟ್ಟೆ ಗ್ರಾಮದ ಸರ್ವೆ ನಂ. 28 ರಲ್ಲಿನ ಲೋಕೆಶ್ ಎಂಬುವರ ಜಮೀನಲ್ಲಿ ಚಿರತೆ ಕಂಡು ಬಂದಿದೆ. ಈ ಬಗ್ಗೆ ದಾವಣಗೆರೆ ಅರಣ್ಯ ‌ಇಲಾಖೆ ಅಧಿಕಾರಿಗಳು ಸ್ಥಳ ಪರಿಶಲಶೀಲಿಸಬೇಕು ಎಂದು ಕಂದನಕೋವಿ ಗ್ರಾಮ ಪಂಚಾಯತಿ ಕಾರ್ಯಾಲಯ ಪತ್ರ ಬರೆದಿತ್ತು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top