ದಾವಣಗೆರೆ: ನಗರದ ವಿವಿಧೆಡೆ ಪ್ಲಾಸ್ಟಿಕ್ ಬಳಕೆ ಅಂಗಡಿ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ಮಾಡಿದ್ದು, ಏಕಬಳಕೆ ಪ್ಲಾಸ್ಟಿಕ್ ನ್ನು ವಶ ಪಡಿಸಿಕೊಂಡು ಒಟ್ಟು ರೂ.16,300 ದಂಡ ವಸೂಲಿ ಮಾಡಲಾಯಿತು.
ಮಹಾನಗರ ಪಾಲಿಕೆಯ ಆಯುಕ್ತರ ಮಾರ್ಗದರ್ಶನದಲ್ಲಿ ಇಂದು (ಮೇ 11) ರಂದು ಮಹಾನಗರ ಪಾಲಿಕೆ ಆರೋಗ್ಯ ವಿಭಾಗದ ಆರೋಗ್ಯ ನಿರೀಕ್ಷಕರುಗಳಾದ ಹರೀಶ್ ಕೆ.ಎನ್. ನಿಖಿಲ್ ಜೆ.ಹೆಚ್. ಮಲ್ಲಿಕಾ ಗುಡೆಕೋಟೆ ಮತ್ತು ಉಷಾ ಅವರನ್ನೊಳಗೊಂಡ ತಂಡ ನಗರದ ಆಂಜನೇಯ ಬಡಾವಣೆ, ಕೆ.ಬಿ. ಬಡಾವಣೆ, ಪಿ.ಜೆ. ಬಡಾವಣೆ, ವಿದ್ಯಾರ್ಥಿ ಭವನ, ಹೂವಿನ ಮಾರುಕಟ್ಟೆ ಮತ್ತಿತರ ಭಾಗಗಳಲ್ಲಿ, ಅಂಗಡಿ, ಬೇಕರಿ, ತಳ್ಳುಗಾಡಿಗಳು, ಹೂವಿನ ಅಂಗಡಿಗಳ ಮೇಲೆ ದಾಳಿ ನಡೆಸಿ ಲಲಿತ ಟಿಫನ್ಸ್, ಕಾವೇರಿ ಬೇಕರಿ ಮುಂತಾದ ಕಡೆ ದಾಳಿ ಮಾಡಲಾಯಿತು.
ದಾಳಿಯಲ್ಲಿ ಬಸವರಾಜ, ಶಫಿ, ಅತಾವುಲ್ಲ, ವಿಲಿಯಮ್ಸ್, ಸುಬ್ಬಣ್ಣ, ರವೀಂದ್ರ, ಅಕ್ಕಮಹಾದೇವಿ, ಆನಂದರಾಮ್, ಆರೀಫ್, ತುಳಜಾರಾಮ್, ಶಿವಶಂಕರ್, ಪ್ರಭಾಕರ ಭಾಗಿಯಾಗಿದ್ದರು.



