Connect with us

Dvgsuddi Kannada | online news portal | Kannada news online

ದಾವಣಗೆರೆ: ಮಗು ಕಳವು ಪ್ರಕರಣ; ಪತ್ತೆಯಲ್ಲಿ ನೆರವಾದ ವೃದ್ಧೆಗೆ 25 ಸಾವಿರ ಬಹುಮಾನ ನೀಡಿ ಸನ್ಮಾನಿಸಿದ ಜಿಲ್ಲಾ ಪೊಲೀಸ್

ದಾವಣಗೆರೆ

ದಾವಣಗೆರೆ: ಮಗು ಕಳವು ಪ್ರಕರಣ; ಪತ್ತೆಯಲ್ಲಿ ನೆರವಾದ ವೃದ್ಧೆಗೆ 25 ಸಾವಿರ ಬಹುಮಾನ ನೀಡಿ ಸನ್ಮಾನಿಸಿದ ಜಿಲ್ಲಾ ಪೊಲೀಸ್

ದಾವಣಗೆರೆ: ಇತ್ತೀಚಿಗೆ ನಗರದ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಅಪರಹಣಕ್ಕೊಳಗಾಗಿದ್ದ ಮಗು ಮತ್ತು ಆರೋಪಿತರ ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನ ಹಾಗೂ ಮಗು ಪತ್ತೆಗೆ ಸಹಕರಿಸಿದ ವೃದ್ಧೆ ಚಂದ್ರಮ್ಮಗೆ ಎಸ್ ಪಿ ಸಿ.ಬಿ.ರಿಷ್ಯಂತ್ 25 ಸಾವಿರ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.

ಡಿವೈಎಸ್ಪಿ ನರಸಿಂಹ ವಿ ತಾಮ್ರಧ್ವಜ, ಪಿಐ ಶಿಲ್ಪಾ ವೈ.ಎಸ್.ಪಿಎಸ್ಐ ಗಳಾದ ಪ್ರಭು ಡಿ. ಕೆಳಗಿನಮನೆ, ಅರವಿಂದ ಬಿ.ಎಸ್., ದಕ್ಷಿಣ ಸಂಚಾರ ಠಾಣೆ, ಶಮಿಮ್ ಉನ್ನಿಸಾ, ಮಾಳವ್ವ ಹೆಚ್ ಮತ್ತು ಸಿಬ್ಬಂದಿಗಳಾದ ರಸೂಲ್ ಸಾಬ್, ರಾಘವೇಂದ್ರ ಕೆ.ಕೆ., ಗಿರೀಶ್, ಗೋವಿಂದಪ್ಪ ಮುನೇಗೌಡ ರವರುಗಳನ್ನು ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿಂದು ಎಸ್ ಪಿ ಸಿ.ಬಿ.ರಿಷ್ಯಂತ್  ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.

ಕಳವಾಗಿ 20 ದಿನದ ನಂತರ ಮಗು ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ವೃದ್ಧೆ ಬಳಿ ಮಗು ಪತ್ತೆಯಾಗಿತ್ತು.‌ ವೃದ್ಧೆ ಗಂಡು ಮಗುವನದನು ಪೊಲೀಸರಿಗೆ ನೀಡಿದ್ದರು.‌ ಈ ಪ್ರಕರಣ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಕಳುವಾಗಿದ್ದ ಮಗು ತಾಯಿ ಮಡಿಲು ಸೇರಲು ಸಹಕಾರಿಯಾದ ಚಂದ್ರಮ್ಮಗೆ ಇಂದು ಸನ್ಮಾನಿಸಲಾಯಿತು.

ಏಪ್ರಿಲ್ 6ರಂದು ದಾವಣಗೆರೆ ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯೊಬ್ಬಳು ಮಗುವನ್ನ ಚಂದ್ರಮ್ಮಕೈಗೆ ಕೊಟ್ಟು ಪರಾರಿ ಆಗಿದ್ದಳು. ದಾವಣಗೆರೆಯಲ್ಲಿ ಮಗು ಅಪಹರಣ ಆದ ಬಗ್ಗೆ ತಿಳಿದಿದ್ದ ಚಂದ್ರಮ್ಮ ನೇರವಾಗಿ ಮಗುವನ್ನ ಪೊಲೀಸರಿಗೆ ಒಪ್ಪಿಸಿದ್ದರು.

ಮಾರ್ಚ್ 16, 2022 ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಉಮೇಸಲ್ಮಾ ಎಂಬ ಮಹಿಳೆಗೆ ಹೆರಿಗೆಗಾಗಿ ದಾವಣಗೆರೆ ನಗರದ ಕೆಆರ್ ಮಾರ್ಕೆಟ್ ಬಳಿ ಇರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಸಂಜೆ ನಾಲ್ಕು ಗಂಟೆಗೆ ಹೆರಿಗೆ ಆಗಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಸಂಜೆ ಆರು ಗಂಟೆಗೆ ಮಗು ನಾಪತ್ತೆ ಆಗಿತ್ತು. ಚೂಡಿ ಹಾಕಿ ತಲೆಗೆ ಬಿಳಿ ಸ್ಕಾರ್ಫ್ ಹಾಕಿದ್ದ ಮಹಿಳೆ ಮಗು ಅಪರಿಸಿದ್ದಳು. ಆದ್ರೆ ಈ ಪ್ರಕರಣ ಪತ್ತೆ ಆಗಲು 20 ದಿನ ಬೇಕಾಯಿತು. ಏಪ್ರಿಲ್ 6 ರಂದು ಮಗು ಪತ್ತೆ ಆಗಿತ್ತು. ಆದ್ರೆ ಆರೋಪಿ ಮಾತ್ರ ಸಿಕ್ಕಿರಲಿಲ್ಲ. ಮರುದಿನ ದಾವಣಗೆರೆ ಆಜಾದ್ ನಗರದ 12ನೇ ಕ್ರಾಸ್ ನಿವಾಸಿ ಗುಲ್ಜಾರ್ ಭಾನು ಮಗು ಕದ್ದು ಮಕ್ಕಳಿಲ್ಲದೆ ನೋವು ಅನುಭವಿಸುತ್ತಿದ್ದ ಬೆಂಗಳೂರಿನಲ್ಲಿ ಇದ್ದ ತನ್ನ ಮಗಳಿಗೆ ಕೊಟ್ಟಿದ್ದ ಬಗ್ಗೆ ಪೊಲೀಸ್ ತನಿಖೆಯಿಂದ ಮಾಹಿತಿ ಸಿಕ್ಕಿತ್ತು. ಆದ್ರೆ ಆರೋಪಿ ಗುಲ್ಜಾರ್ ಭಾನು ಮಗಳು ಚಂದ್ರಮ್ಮ ಕೈಗೆ ಮಗು ಕೊಟ್ಟು ಪರಾರಿ ಆಗಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top