ದಾವಣಗೆರೆ: ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ ವಿಭಾಗದ ಖೋ ಖೋ ಪಂದ್ಯಾವಳಿಯು ಕೇಂದ್ರೀಯ ವಿಶ್ವವಿದ್ಯಾನಿಲಯ ಹಿಮಾಚಲ ಪ್ರದೇಶದ ಧಮ೯ಶಾಲದಲ್ಲಿ ಮಾರ್ಚ್ 27 ರಿ೦ದ 30 ರವರೆಗೆ ನಡೆಯಿತು.ಈ ಪಂದ್ಯಾವಳಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಪುರುಷರ ತಂಡ 3 ನೇ ಸ್ಥಾನವನ್ನು ಗಳಿಸಿದೆ.
ಹಿಮಾಚಲದ ಮುಖ್ಯಮಂತ್ರಿ ಹಾಗೂ ಕೇಂದ್ರದ ಕ್ರೀಡಾ ಸಚಿವರಿಂದ ತಂಡದ ನಾಯಕ ಧರ್ಮೇಂದ್ರ, ವ್ಯವಸ್ಥಾಪಕರಾದ ಕಲ್ಲೇಶಪ್ಪ ತಂಡದ ತರಬೇತಿದಾರ ಹೆಚ್.ತಿಪ್ಪೇಸ್ವಾಮಿ ಪ್ರಶಸ್ತಿ ಸ್ವೀಕರಿಸಿದರು. ಆಟಗಾರರಾದ ಭರತ್, ವೀರೇಶ, ಶರತ್ , ವಿಶಾಲ್, ಲಕ್ಷ್ಮಣ್, ರಾಜುಪ್ರಶಾಂತ್, ಬಾಹುಬಲಿ, ರ೦ಗನಾಥ, ಶಂಕರ ಮತ್ತು ಗಗನ್ ಇದ್ದರು.
ದಾವಣಗೆರೆ ವಿಶ್ವ ವಿದ್ಯಾನಿಲಯದ ಪುರುಷರ ವಿಭಾಗದ ಖೋ ಖೋ ತಂಡವು ಸತತವಾಗಿ ಮೂರು ಬಾರಿ ದಕ್ಷಿಣ ವಲಯ ಅಂತರ ವಿಶ್ವವಿದ್ಯಾ ನಿಲಯಗಳ ಮತ್ತು ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಖೋ ಖೋ ಪಂದ್ಯಾವಳಿಯಲ್ಲಿ ಜಯ ವನ್ನು ಸಾಧಿಸುವುದರ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ. ಇದು ದಾವಣಗೆರೆ ವಿಶ್ವವಿದ್ಯಾನಿಲ ಯದ ಕ್ರೀಡಾ ವಿಭಾಗಕ್ಕೆ ವಿಶೇಷ ಕೊಡುಗೆಯಾಗಿದೆ. ದಾವಣಗೆರೆ ವಿವಿಯ ಪ್ರಭಾರ ಕುಲಪತಿ ಲಕ್ಷ್ಮಣ್, ರಿಜಿಸ್ಟ್ರಾರ್ ಗಾಯತ್ರಿ ದೇವರಾಜ್, ದೈಹಿಕ ಶಿಕ್ಷಣ ನಿರ್ದೇಶಕ ವೆಂಕಟೇಶ್, ಸಿಂಡಿಕೇಟ್ ಸದಸ್ಯ ಡಾ.ಡಿ. ಧರಣೇಂದ್ರಯ್ಯ ಮತ್ತಿತರರು ಅಭಿನಂದಿಸಿದ್ದಾರೆ.



