Connect with us

Dvgsuddi Kannada | online news portal | Kannada news online

ದಾವಣಗೆರೆ; ದುಗ್ಗಮ್ಮ ಜಾತ್ರೆಯಲ್ಲಿ ಕೋಣ, ಆಡು, ಕುರಿ, ಕೋಳಿ ಬಲಿ ತಡೆಗಟ್ಟಲು ಜಿಲ್ಲಾಡಳಿತಕ್ಕೆ ಮನವಿ; ದಯಾನಂದ ಸ್ವಾಮೀಜಿ

ದಾವಣಗೆರೆ

ದಾವಣಗೆರೆ; ದುಗ್ಗಮ್ಮ ಜಾತ್ರೆಯಲ್ಲಿ ಕೋಣ, ಆಡು, ಕುರಿ, ಕೋಳಿ ಬಲಿ ತಡೆಗಟ್ಟಲು ಜಿಲ್ಲಾಡಳಿತಕ್ಕೆ ಮನವಿ; ದಯಾನಂದ ಸ್ವಾಮೀಜಿ

ದಾವಣಗೆರೆ: ದಾವಣಗೆರೆ ದುಗ್ಗಮ್ಮ ದೇವಿ ಜಾತ್ರೆಯು ಪ್ರಾಣಿಬಲಿ ಮುಕ್ತ, ರಕ್ತ ಮುಕ್ತ, ಹಿಂಸಾಮುಕ್ತ ಆಗಬೇಕು. ಇಂತಹ ಅಮಾನವೀಯ ಪದ್ದತಿ ಕೊನೆ ಆಗಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಪಶು ಪ್ರಾಣಿ ಬಲಿ ನಿರ್ಮೂಲನ ಜಾಗೃತಿ ಮಹಾಸಂಘ ಮತ್ತು ಬಸವ ಧರ್ಮ ಜ್ಞಾನಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ತಿಳಿಸಿದರು.

ರಾಜ್ಯ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯಲ್ಲಿ ಕೋಣ, ಆಡು, ಕುರಿ, ಕೋಳಿ ಮುಂತಾದ ಪ್ರಾಣಿಗಳ ಬಲಿ ತಡೆಗಟ್ಟಲು ದಾವಣಗೆರೆ ಜಿಲ್ಲಾಡಳಿತ ಪೊಲೀಸ್ ಇಲಾಖೆಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು

ಮಾರ್ಚ್ 15 ಮತ್ತು 16 ರಂದು ದಾವಣಗೆರೆಯ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನ ದೇವಿಯ ಜಾತ್ರೆ ಇದೆ. ಈ ವೇಳೆ ಸಾವಿರಾರು ಕುರಿ ಕೋಣ ಕೋಳಿ ಆಡುಗಳನ್ನು ಬಲಿ ನೀಡಲಾಗುತ್ತದೆ. ಪ್ರಾಣಿಬಲಿ ಮಾಡದೆ ಜೀವ ಹಿಂಸೆ ತ್ಯಜಿಸಿ ಸಾತ್ವಿಕ ಅಹಿಂಸಾತ್ಮಕ ಪೂಜಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಮೈಗೂಡಿಸಿಕೊಂಡು ಪೂಜಾ ಕೈಂಕರ್ಯಗಳನ್ನು ಸಲ್ಲಿಸುವಂತೆ ಭಕ್ತರಲ್ಲಿ ಮತ್ತು ದೇವಾಲಯ ಹಾಗೂ ಜಾತ್ರೆಯ ಸಮಿತಿಯಲ್ಲಿ ಮನವಿ ಮಾಡಲಾಗುವುದು ಎಂದರು.

ದಾವಣಗೆರೆ ಜಿಲ್ಲೆಯ ಯಾವುದೇ ಕಡೆಗಳಲ್ಲಿ ಪ್ರಾಣಿ ಬಲಿ ನಡೆಯದಂತೆ ಡಿಸಿ, ಎಸ್ಪಿ, ಪಿಎಸ್ಐಗಳಿಗೆ ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಬೇಕು. ಒಂದು ವೇಳೆ ಪ್ರಾಣಿ ಬಲಿ ನಡೆದರೆ ಸಂಬಂದಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ರಾಜ್ಯದಲ್ಲಿ ಯಾವುದೇ ವಯಸ್ಸಿನ ಹಸು, ಆಕಳು, ಎತ್ತು, ಹೋರಿ, ಕರುಗಳು, 13 ವರ್ಷದ ಒಳಗಿನ ಎಮ್ಮೆ, ಕೋಣಗಳನ್ನು ಯಾರೇ ಆಗಲಿ, ಯಾವುದೇ ಕಾರಣಕ್ಕೆ ಎಲ್ಲಿಯೂ ಹತ್ಯೆ ಮಾಡುವಂತಿಲ್ಲ. ಒಂದು ವೇಳೆ ಕಾನೂನನ್ನು ಉಲ್ಲಂಘಿಸಿದರೆ 3ರಿಂದ 7ವರ್ಷ ಜೈಲು ಶಿಕ್ಷೆ, 50ಸಾವಿರದಿಂದ 10 ಲಕ್ಷದವರೆಗೆ ದಂಡ ವಿಧಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ತಿಳಿಸಿದೆ ಎಂದು ಹೇಳಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top