Connect with us

Dvgsuddi Kannada | online news portal | Kannada news online

ದಾವಣಗೆರೆ: ವಾಲ್ಮೀಕಿ ಶ್ರೀ ಪೀಠ ತಾಗ್ಯಕ್ಕೆ ಆಗ್ರಹ

valmiki

ದಾವಣಗೆರೆ

ದಾವಣಗೆರೆ: ವಾಲ್ಮೀಕಿ ಶ್ರೀ ಪೀಠ ತಾಗ್ಯಕ್ಕೆ ಆಗ್ರಹ

ದಾವಣಗೆರೆ: ಜಾತಿ ನಕಲಿ ದಾಖಲೆ ಸೃಷ್ಠಿಸಿ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ಈ ಕೂಡಲೇ ಪೀಠ ತ್ಯಾಗ ಮಾಡಬೇಕು ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಹಿತರಕ್ಷಣಾ ಸಂಘದ ರಾಜ್ಯಾಧ್ಯಕ್ಷ ಎಸ್.ಹೆಚ್ ಸುಭಾಷ್ ಆಗ್ರಹಿಸಿದ್ಧಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಬೆಸ್ತ ತಳವಾರ ಸಮುದಾಯಕ್ಕೆ ಸೇರಿದ  ಪ್ರಸನ್ನಾನಂದ ಪುರಿ ಸ್ವಾಮೀಜಿ, ನಕಲಿ ದಾಖಲೆ ಸೃಷ್ಠಿಸಿ ನಾಯಕ ಸಮಾಜಕ್ಕೆ ಸಲ್ಲಬೇಕಾದ ಸರ್ಕಾರಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ಧಾರೆ.   ಓಟರ್ ಐಡಿ, ಪಡಿತರ ಚೀಟಿ ಸೇರಿದಂತೆ ಹಲವು ದಾಖಲೆಗಳಲ್ಲಿ ಬೆಸ್ತ ತಳವಾರ ಎಂದು ನಮೂದಾಗಿದೆ. ನಿಜವಾದ ನಾಯಕ ವಾಲ್ಮೀಕಿ ಸಮುದಾಯವನ್ನು ಸಾರ್ವಜನಿಕವಾಗಿ ಕೀಳಾಗಿ ಕಾಣುತ್ತಿದ್ದಾರೆ ಎಂದರು.

ವಾಲ್ಮೀಕಿ ಜಾತ್ರೆ ಹೆಸರಿನಲ್ಲಿ ಶ್ರೀಗಳು ಕಪ್ಪು ಹಣವನ್ನು ವೈಟ್ ಮಾಡಲು ಹೊರಟಿದ್ದಾರೆ.  ಇದಕ್ಕೆ ಟ್ರಸ್ಟಿನ ಸದಸ್ಯರು ಜೊತೆಗೂಡಿದ್ದಾರೆಂದರು , ಹೀಗಾಗಿ ಟ್ರಸ್ಟ್ ನಲ್ಲಯೂ ಕೂಡ ಬೆಸ್ತ ಸಮುದಾಯದವರಿದ್ದು, ನಾಯಕ ಸಮಾಜದ ಸದಸ್ಯರಿಲ್ಲ. ಶ್ರೀಗಳು ತಮ್ಮ ಕುಟುಂಬದ ಸದಸ್ಯರಿಗೆ ಆಸ್ತಿ ಮಾಡಲು ಸಹಕಾರ ನೀಡುತ್ತಿದ್ದಾರೆ ಎಂದರು.

ಜಾತ್ರೆ ಹೆಸರಿನಲ್ಲಿ ಸರ್ಕಾರದಿಂದ ಕೋಟ್ಯಾಂತರ ಹಣಪಡೆದು ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಸಮಾಜದವರಿಂದಲೂ ವಸೂಲಿ ಮಾಡಿದ್ದಾರೆ. ಸರ್ಕಾರದ ಅನುದಾನ ಸಮಾಜಕ್ಕೆ ಅನುಕೂಲವಾಗಿಲ್ಲ.  ಬದಲಿಗೆ ಶ್ರೀಗಳ ಸ್ವಹಿತಾಸಕ್ತಿಗೆ ಬಳಕೆಯಾಗಿದೆ. ಶ್ರೀಗಳು ಕೂಡಲೇ ಪೀಠತ್ಯಾಗ ಮಾಡಬೇಕು. ಟ್ರಸ್ಟ್‌ ನಲ್ಲಿರುವ ಬೇರೆ ಸಮುದಾಯದವರನ್ನು ತಕ್ಷಣ ತೆಗೆದು ಹಾಕಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ವಾಲ್ಮೀಕಿ ಗುರುಪೀಠದ ಬ್ರಹ್ಮಾನಂದ ಗುರೂಜಿ,ಸುರೇಶ್ ತಾತ,ವಿಶ್ವಾರಾಧ್ಯ ನಾಯ್ಕ್,ಅಂಜಿನಾಯ್ಕ್ ಉಪಸ್ಥಿತರಿದ್ದರು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top