Connect with us

Dvgsuddi Kannada | online news portal | Kannada news online

ದಾವಣಗೆರೆ: ಮೃತಪಟ್ಟವರಿಗೆ ಪರಿಹಾರ ನೀಡದ ಮೂರು KSRTC ಬಸ್ ಜಪ್ತಿ

ದಾವಣಗೆರೆ

ದಾವಣಗೆರೆ: ಮೃತಪಟ್ಟವರಿಗೆ ಪರಿಹಾರ ನೀಡದ ಮೂರು KSRTC ಬಸ್ ಜಪ್ತಿ

ದಾವಣಗೆರೆ: ಮೃತಪಟ್ಟವರಿಗೆ ಪರಿಹಾರ ನೀಡದ KSRTC ಮೂರು ಬಸ್‌ಗಳನ್ನು ನ್ಯಾಯಾಲಯದ ಆದೇಶದ ಹರಿಹರ ಬಸ್‌ ನಿಲ್ದಾಣದಲ್ಲಿ ಜಪ್ತಿ ಮಾಡಲಾಗಿದೆ.

2017 ರಲ್ಲಿ ಹರಿಹರ ತಾಲ್ಲೂಕಿನ ರಾಜನಹಳ್ಳಿ ಕ್ರಾಸ್‌ ಬಳಿ ಹುಬ್ಬಳ್ಳಿ ಘಟಕದ ಬಸ್‌ ಅಫಘಾತಕ್ಕೀಡಾಗಿತ್ತು.ಅದರಲ್ಲಿ ಹರಿಹರ ತಾಲ್ಲೂಕು ಹೊಸಳ್ಳಿಯ ಚಂದ್ರಪ್ಪ ಅವರ ಮಕ್ಕಳಾದ ಬಸವರಾಜ ಮತ್ತು ಮಂಜುನಾಥ ಮೃತಪಟ್ಟಿದ್ದರು. ಒಬ್ಬರು ಪೊಲೀಸ್‌ ಇನ್‌ಸ್ಪೆಕ್ಟರ್‌ ಆಗಿದ್ದರು. ಇನ್ನೊಬ್ಬರು ಕೃಷಿಕರಾಗಿದ್ದರು. ಈ ಪ್ರಕರಣದಲ್ಲಿ ಒಟ್ಟು 24 ಲಕ್ಷ ಪರಿಹಾರ ನೀಡುವಂತೆ ಹರಿಹರ ತಾಲ್ಲೂಕು ನ್ಯಾಯಾಲಯವು ತೀರ್ಪು ನೀಡಿತ್ತು. Ksrtc ಇದುವರೆಗೆ ಪರಿಹಾರ ನೀಡಿರಲಿಲ್ಲ.

ದುಡಿಯುವ ತಮ್ಮ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದರಿಂದ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಮೃತರ ತಂದೆ ಚಂದ್ರಪ್ಪ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಹುಬ್ಬಳ್ಳಿ ವಿಭಾಗದ ಮೂರು ಬಸ್‌ಗಳನ್ನು ವಶಪಡಿಸಿಕೊಳ್ಳುವಂತೆ ಕೋರ್ಟ್ ನ್ಯಾಯಾಧೀಶರು ಆದೇಶಿಸಿದ್ದರು. ಈ ಆದೇಶ ಅನ್ವಯ ಮೂರು ಬಸ್‌ಗಳನ್ನು ಜಪ್ತಿ ಮಾಡಿ, ನ್ಯಾಯಾಲಯಕ್ಕೆ ತರಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top