Connect with us

Dvgsuddi Kannada | online news portal | Kannada news online

ಬಾಳೆ ಹಣ್ಣು ಮಾರಾಟಗಾರನನ್ನು ಪಾಲಿಕೆ ನಾಮನಿರ್ದೇಶಿತ ಸದಸ್ಯನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಬಿಜೆಪಿಗೆ ಚಿರಋಣಿ: ಶಿವನಗೌಡ ಪಾಟೀಲ್

ದಾವಣಗೆರೆ

ಬಾಳೆ ಹಣ್ಣು ಮಾರಾಟಗಾರನನ್ನು ಪಾಲಿಕೆ ನಾಮನಿರ್ದೇಶಿತ ಸದಸ್ಯನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಬಿಜೆಪಿಗೆ ಚಿರಋಣಿ: ಶಿವನಗೌಡ ಪಾಟೀಲ್

ದಾವಣಗೆರೆ: ನಾನು ಯಾವ ಪಾಲಿಕೆ ವಾಪ್ತಿಯಲ್ಲಿ ಬಾಳೆಹಣ್ಣು ಮಾರಾಟ ಮಾಡುತ್ತಿದ್ದೆನೋ,  ಅದೇ ಪಾಲಿಕೆಯನ್ನು ಪ್ರತಿನಿಧಿಸುವ ಅವಕಾಶವನ್ನು ಭಾರತೀಯ ಜನತಾ ಪಾರ್ಟಿ ಕಲ್ಪಿಸಿದಕ್ಕೆ ಚಿರಋಣಿಯಾಗಿದ್ದೇನೆ ಎಂದು ದಾವಣಗೆರೆ ಮಹಾನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯ  ಶಿವನಗೌಡ ಪಾಟೀಲ್ ಹೇಳಿದ್ಧಾರೆ.

ಕಳೆದ ಒಂದು ವರ್ಷ ಏಳು ತಿಂಗಳು ಗಳ ಕಾಲ ಮಹಾನಗರ ಪಾಲಿಕೆ ಸದಸ್ಯನಾಗಿ ಸೇವೆ ಮಾಡುವ ಅವಕಾಶವನ್ನು ನಮ್ಮ ಪಕ್ಷ  ಹಾಗೂ ಪಕ್ಷದ ಕಾರ್ಯಕರ್ತರ ಹಿರಿಯರ ಆಶಿರ್ವಾದ ಫಲವಾಗಿ ಮಹಾನಗರ ಪಾಲಿಕೆಯ ಸದಸ್ಯನಾಗಿ ಸೇವೆ ಮಾಡುವ ಅವಕಾಶ ನನ್ನದಾಗಿತ್ತು.

ರಾಜಕೀಯ ಕುಟುಂಬದ ಹಿನ್ನೆಲೆ ಇಲ್ಲದೆ,ಆಕಸ್ಮಿಕವಾಗಿ ವೃತ್ತಿ ಜೀವನದ ಜೊತೆ ರಾಜಕೀಯ ಪ್ರವೇಶಿಸಿದ ನನಗೆ, ಭಾರತೀಯ ಜನತಾ ಪಕ್ಷ ದಾವಣಗೆರೆ ದಕ್ಷಿಣ ಮಂಡಲ ಯುವ ಮೊರ್ಚಾದ ಸದಸ್ಯನನ್ನಾಗಿ,ಯುವ ಮೊರ್ಚಾದ ಪ್ರದಾನ ಕಾರ್ಯದರ್ಶಿಯಾಗಿ,ಯುವ ಮೊರ್ಚಾದ ಅಧ್ಯಕ್ಷ ನಾಗಿ, ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿತು.

ನಿಜಕ್ಕೂ ನನಗೆ ಹೆಮ್ಮ ಅನಿಸಿದೆ Party with defence ಅಕ್ಷರಶಃ ನಿಜವಾಗಿ ಸತ್ಯ ಅದಕ್ಕೆ ಉದಾಹರಣೆ ಎಂಬಂತೆ ನಾನು ಯಾವ ಪಾಲಿಕೆ ವಾಪ್ತಿಯಲ್ಲಿ ಬಾಳೆಹಣ್ಣು ಮಾರಾಟವನ್ನು ಮಾಡುತ್ತಿದ್ದೆ,ಅದೇ ಪಾಲಿಕೆಯನ್ನು ಪ್ರತಿನಿಧಿಸುವ ಅವಕಾಶವನ್ನು ಭಾರತೀಯ ಜನತಾ ಪಾರ್ಟಿ  ಹಾಗೂ ನನ್ನ ನೆಚ್ಚಿನ ನಾಯಕರಾದ,ಯಶವಂತರಾವ್ ಜಾಧವ್,ಜನಪ್ರಿಯ ಲೋಕಸಭಾ ಸದಸ್ಯರು ಕೇಂದ್ರದ ಮಾಜಿ ಸಚಿವರಾದ ಜಿ.ಎಂ ಸಿದ್ದೇಶ್ವರ ಅವರು,ಮಾಜಿ.ಸಚಿವರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್.ಎ.ರವೀಂದ್ರನಾಥ, ಅವರು ಜಿಲ್ಲಾ ಅದ್ಯಕ್ಷ ರಾದ ಹನಗವಾಡಿ ವೀರೇಶ ಅವರು ಪಕ್ಷದ ಎಲ್ಲಾ ಮುಖಂಡರಿಗು ಸಹಕರಿಸಿದ ಪ್ರತಿಯೊಬ್ಬರಿಗೂ ಅನಂತ ಅನಂತ ಧನ್ಯವಾದಗಳು ಎಂದು  ತಿಳಿಸಿದ್ದಾರೆ.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top