Connect with us

Dvgsuddi Kannada | online news portal | Kannada news online

ದಾವಣಗೆರೆ: ಶೆಡ್ ತೆರವು ವಿಚಾರಕ್ಕೆ ಮೇಯರ್ ಸಮ್ಮುಖದಲ್ಲಿ ಕೈ-ಕೈ ಮಿಲಾಯಿಸಿದ ಸ್ಥಳೀಯರು..!

ದಾವಣಗೆರೆ

ದಾವಣಗೆರೆ: ಶೆಡ್ ತೆರವು ವಿಚಾರಕ್ಕೆ ಮೇಯರ್ ಸಮ್ಮುಖದಲ್ಲಿ ಕೈ-ಕೈ ಮಿಲಾಯಿಸಿದ ಸ್ಥಳೀಯರು..!

ದಾವಣಗೆರೆ: ಶೆಡ್ ತೆರವು ವಿಚಾರಕ್ಕೆ ಸ್ಥಳೀಯರ ಮಧ್ಯೆ ಗಲಾಟೆ ನಡೆದೆ.  ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಎಸ್. ಟಿ. ವೀರೇಶ್  ಸಮ್ಮುಖದಲ್ಲಿಯೇ ಸ್ಥಳೀಯರು ಕೈ-ಕೈ ಮಿಲಾಯಿಸಿದ್ದಾರೆ.

ಈ ಘಟನೆ ನಗರದ ಕಾಟನ್ ಮಿಲ್ ಪ್ರದೇಶದಲ್ಲಿ ನಡೆದಿದೆ.  ಕಳೆದ ವಾರ ಭಾರೀ ಮಳೆ ಸುರಿದ್ದಿದ್ದರಿಂದ ನೀರು ಸರಾಗವಾಗಿ ಹರಿಸದು ಹೋಗಲು ಮೂಲಸೌಕರ್ಯ ಕಲ್ಪಿಸಲು 31ನೇ ವಾರ್ಡ್ ಸದಸ್ಯ ನಾಗರಾಜ್ ಮನವಿ ಮಾಡಿದ್ದರು. ಮೇಯರ್ ಎಸ್. ಟಿ.  ವೀರೇಶ್ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಕೈ-ಕೈ ಮಿಲಾಯಿಸಿ ಸ್ಥಳೀಯರು ಗಲಾಟೆ ಮಾಡಿಕೊಂಡಿದ್ದಾರೆ.

ನೀರು ಸರಾಗವಾಗಿ ಹರಿಸದು ಹೋಗಲು ಕಸ ತುಂಬದಂತೆ ಸ್ಲಾಬ್ ನಿರ್ಮಾಣಕ್ಕೆ ಶೆಡ್ ತೆರವು ಮಾಡುವಂತೆ ಮೇಯರ್ ಸೂಚಿಸಿದ್ದಾರೆ. ಆಗ ಶೆಡ್ ನಿರ್ಮಿಸಿಕೊಂಡಿದ್ದ ವ್ಯಕ್ತಿ ಸ್ಥಳೀಯರೊಂದಿಗೆ ಜಗಳಕ್ಕಿಳಿದು ಕೈ-ಕೈ ಮಿಲಾಯಿಸಿದ್ದಾರೆ. ಈ ವೇಳೆ ಶೆಡ್ ನಿರ್ಮಿಸಿಕೊಂಡಿದ್ದ ವ್ಯಕ್ತಿ ವಿರುದ್ಧ  ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಮೇಯರ್ ಹಾಗೂ ಪಾಲಿಕೆ ಸದಸ್ಯರು ಬಿಡಿಸಿದರೂ ಬಿಡದೆ  ಜೋರಾಗಿ ಗಲಾಟೆ ನಡೆದಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top