ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸೂಚನೆ ಮೇರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳಿಂದ ವಸೂಲಿ ಮಾಡುತ್ತಿದ್ದ ಜಕಾತಿಯನ್ನು ಸ್ಥಗಿತಗೊಳಿಸಲಾಗಿದೆ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಆದೇಶಿಸಿದ್ದಾರೆ.
ಸಚಿವರ ಈ ಸೂಚನೆಯಿಂದ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ನೂರಾರು ಬಡವರಿಗೆ ಅನುಕೂಲವಾಗಲಿದೆ. ಯಾರಾದರೂ ಜಕಾತಿ ವಸೂಲಿಗೆ ಬಂದರೆ ಜಕಾತಿ ನೀಡಬೇಡಿ. ವಸೂಲಿಗೆ ಬಂದವರ ವಿರುದ್ಧ ಪಾಲಿಕೆ ಕಚೇರಿಗೆ ಹಾಗೂ ಆಯುಕ್ತರಿಗೆ ದೂರು ನೀಡಿ ಎಂದು ಸೂಚನೆ ನೀಡಲಾಗಿದೆ.



