Connect with us

Dvgsuddi Kannada | online news portal | Kannada news online

ದಾವಣಗೆರೆ: ವಿಶ್ವಕರ್ಮ ಸಮಾಜದಿಂದ ಸಾಮೂಹಿಕ ಉಪನಯನ, ವಿವಾಹ ಮಹೋತ್ಸವ

ದಾವಣಗೆರೆ

ದಾವಣಗೆರೆ: ವಿಶ್ವಕರ್ಮ ಸಮಾಜದಿಂದ ಸಾಮೂಹಿಕ ಉಪನಯನ, ವಿವಾಹ ಮಹೋತ್ಸವ

ದಾವಣಗೆರೆ: ಜಿಲ್ಲೆಯ ವಿಶ್ವಕರ್ಮ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 40ನೇ ವರ್ಷದ ಸಾಮೂಹಿಕ ಉಪನಯನ ಮತ್ತು ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಮೇ 21ರಂದು ನಗರದ ಕಾಳಿಕಾದೇವಿ ರಸ್ತೆಯಲ್ಲಿನ ಶ್ರೀಕಾಳಿಕಾಂಬ ವಿಶ್ವಕರ್ಮ‌ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ವಿ.ಎಂ. ಕೊಟ್ರೇಶ ಆಚಾರ್ ಹೇಳಿದರು.

ಅಂದು ಬೆಳಗ್ಗೆ 11ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಅನಗೂಡಿನ ಅಂತರವಳ್ಳಿ ಶಾಖಾ‌ ಮಠದ ಶ್ರೀ ಭಾಸ್ಕರ್ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಧ್ಯಕ್ಷತೆ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಸಾಪುರದ ಬಿ.ನಾಗೇಂದ್ರ ಚಾರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಮಹಾಪೌರ ವಿನಾಯಕ ಪೈಲ್ವಾನ್, ವರ್ತಕ ಬಿ.ಸಿ. ಉಮಾಪತಿ, ದಾವಣಗೆರೆ ಹರಿಹರ ಅರ್ಬನ್ ಸಹಕಾರ ಬ್ಯಾ೦ಕಿನ ಅಧ್ಯಕ್ಷ ಎನ್‌.ಮುರುಗೇಶ ಆಗಮಿಸುವರು ಎಂದುತಿಳಿಸಿದರು.

ಅತಿಥಿಗಳಾಗಿ ಬಿ.ಎಲ್.ಸೀತಾರಾಮ ಚಾರ್, ಬಿ.ವಿ.ಶಿವಾನಂದ, ಎನ್. ಪೂರ್ವಾ ಚಾರ್ಯ,
ಜಿ.ಪಿ.ಜಗನ್ನಾಥ, ರಾಕೇಶ್ ಜಾಧವ್, ಕೆ.ಪಿ.ಪರಮೇಶ್ವರಪ್ಪ, ಎಚ್.ಓ.ವಿರುಪಾ ಕಾಚಾರ್, ಅಖಂಡೇಶ್ವರಎಂ.ಪತ್ತಾರ, ಎಸ್.ರುದ್ರಾಚಾರ, ಎಸ್. ತಿಪ್ಪೇಸ್ವಾಮಿ,
ಶಾಂತಾಚಾರ್, ನಾಗರಾಜಚಾರ್, ಗುರು ಸಿದ್ದಚಾರ್, ವೀರಾಚಾರ್ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top