Connect with us

Dvgsuddi Kannada | online news portal | Kannada news online

ದಾವಣಗೆರೆ: ಕಲ್ಯಾಣ ಮಂಟಪಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ; ನಗದು, ಚಿನ್ನಾಭರಣ ಸಹಿತ 1.20 ಲಕ್ಷ ಮೌಲ್ಯದ ಸ್ವತ್ತು ವಶ

ದಾವಣಗೆರೆ

ದಾವಣಗೆರೆ: ಕಲ್ಯಾಣ ಮಂಟಪಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ; ನಗದು, ಚಿನ್ನಾಭರಣ ಸಹಿತ 1.20 ಲಕ್ಷ ಮೌಲ್ಯದ ಸ್ವತ್ತು ವಶ

ದಾವಣಗೆರೆ; ನಗರದ ಕಲ್ಯಾಣ ಮಂಟಪಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ ಮಾಡಲಾಗಿದ್ದು ನಗದು, ಚಿನ್ನಾಭರಣ ಸಹಿತ 1.20 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.

ಏ. 29 ರಂದು ರಾಜು ಜಿ.ಎನ್ ಎಂಬುವರು ಗೋಪನಾಳ ಗ್ರಾಮದಿಂದ ತನ್ನ ಅಳಿಯನ ಮದುವೆಗೆ ದಾವಣಗೆರೆ ಎನ್.ಹೆಚ್ 48 ರಲ್ಲಿ ಬೈಪಾಸ್ ಪಕ್ಕದ ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪಕ್ಕೆ ಕುಟುಂಬ ಸಮೇತ ಬಂದು, ಕಲ್ಯಾಣ ಮಂಟಪ ರೂಂ ನಲ್ಲಿ ಉಳಿದುಕೊಂಡಿದ್ದರು. ರಾತ್ರಿ 9.30ಕ್ಕೆ ಎಲ್ಲರೂ ಮದುವೆ ಮಂಟಪದ ಬಳಿ ವಧು- ವರರ ಜೊತೆ ಪೋಟೋ ತೆಗೆಸಿಕೊಂಡು ಊಟ ಮಾಡಿ ರಾತ್ರಿ ಸುಮಾರು 11 ಗಂಟೆಗೆ ವಾಪಸ್ ನಮ್ಮ ರೂಮಿಗೆ ಹೋಗಿ ನೋಡಿದಾಗ ಯಾರೋ ಕಳ್ಳತನ ಮಾಡಿದ್ದರು. ರೂಮಿನಲ್ಲಿಟ್ಟಿದ್ದ 30.05 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಮತ್ತು ಮದುವೆಗೆ ಹಾಕಿದ್ದ ಗೀಫ್ಟ್ ಕವರ್‌ಗಲ್ಲಿನ 35 ಸಾವಿರ ರೂಪಾಯಿಯನ್ನು ಕಳ್ಳತನ ಮಾಡಿದ್ದಾರೆ ಎಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿ ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಪ್ರಭಾವತಿ ಸಿ ಶೇತಸನದಿ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡವು ದಾವಣಗೆರೆ ಶಾಂತಿನಗರದ ಕಿರಣ್ ನಾಯ್ಕ(25) ವಶಕ್ಕೆ ಪಡೆಯಲಾಗಿದೆ.

ಆರೋಪಿಯಿಂದ ಕಳ್ಳತನ ಮಾಡಿದ್ದ 1 ಲಕ್ಷ ಬೆಲೆ ಬಾಳುವ 17.610 ಗ್ರಾಂ ಬಂಗಾರದ ಆಭರಣಗಳು, ಮತ್ತು 20 ಸಾವಿರ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಪ್ರಕರಣದ ಆರೋಪಿ ಪತ್ತೆ ಮತ್ತು ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿಗಳಿಗೆ ಎಸ್ಪಿ ಡಾ. ಅರುಣ್ ಕೆ., ಹೆಚ್ಚುವರಿ ಎಸ್ಪಿ ಆರ್.ಬಿ ಬಸರಗಿ ಶ್ಲಾಘಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top