Connect with us

Dvgsuddi Kannada | online news portal | Kannada news online

ದಾವಣಗೆರೆ ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: ಮೂವರು ಅಂತರ್ ರಾಜ್ಯ ಕಳ್ಳರ ಬಂಧನ; 22.92 ಲಕ್ಷ ಮೌಲ್ಯದ  ಸ್ವತ್ತು ವಶ

sp rishanth pc

ದಾವಣಗೆರೆ

ದಾವಣಗೆರೆ ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: ಮೂವರು ಅಂತರ್ ರಾಜ್ಯ ಕಳ್ಳರ ಬಂಧನ; 22.92 ಲಕ್ಷ ಮೌಲ್ಯದ  ಸ್ವತ್ತು ವಶ

ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಮೂವರು ಅಂತರ್ ರಾಜ್ಯ ಕಳ್ಳರ ಬಂಧಿಸಿದ್ದಾರೆ. ಬಂಧಿತರಿಂದ 22.92 ಲಕ್ಷ ಮೌಲ್ಯದ  ಸ್ವತ್ತು ವಶ ಪಡಿಸಿಕೊಳ್ಳಲಾಗಿದೆ.

ದಿನಾಂಕ 14-01-2021 ರಂದು ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಹಾಗೂ ನಿಪ್ಪಾಣಿ, ಸಂಕೇಶ್ವರ, ಖಾನಾಪುರ, ಹಾವೇರಿ, ರಾಣೆಬೆನ್ನೂರು, ಹರಿಹರ ನಗರಗಳಲ್ಲಿ ಒಟ್ಟು 10 ಮನೆಗಳ್ಳತನ ಮಾಡಿದ್ದ 03 ಜನ ಆರೋಪಿತರನ್ನು ಬಂಧನ ಮಾಡಿದ್ದು,  ಮಾಡಿದ್ದು, ಆರೋಪಿರಿಂದ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ 16,84,000/-ರೂ ಮೌಲ್ಯದ 421 ಗ್ರಾಂ ಬಂಗಾರದ ಆಭರಣ,   2,16,000/-ರೂ ಮೌಲ್ಯದ 3,600 ಗ್ರಾಂ ತೂಕದ ಬೆಳ್ಳಿಯ ಆಭರಣ ಹಾಗೂ 1,00,000/- ರೂ ನಗದು ಹಣವನ್ನು ಫಾಸಿಲ್ ಕಂಪನಿಯ ವಾಚ್ ಬೆಲೆ ಸುಮಾರು 7000 ಹಾಗೂ 2,85,000/- ರೂ ಬೆಲೆಯ ಒಂದು ಮಾರುತಿ ಸುಜುಕಿ ಸ್ವಿಪ್ಟ್ ಕಾರ್ ಒಟ್ಟು 22,92,000/-ರೂ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.

ಆರೋಪಿತರ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕ  ರಾಮಗೊಂಡ ಬಸರಗಿ ಕೆ.ಎಸ್.ಪಿ.ಎಸ್, ಸಹಾಯಕ ಪೊಲೀಸ್ ಅಧೀಕಕ್ಷಕಿ  ಕನ್ನಿಕಾ ಸಿಕ್ರಿವಾಲ್, ಪೊಲೀಸ್ ಉಪಾಧೀಕ್ಷಕ  ಬಸವರಾಜ.ಬಿ.ಎಸ್ ಮತ್ತು  ರುದ್ರೇಶ್ ರವರ ಮಾರ್ಗದರ್ಶನದಲ್ಲಿ  ಸತೀಶ ಕುಮಾರ.ಯು ಸಿಪಿಐ ಹರಿಹರ ವೃತ್ತ ರವರ ನೇತೃತ್ವದಲ್ಲಿ ಸುನೀಲ ಬಿ ತೇಲಿ ಪಿ.ಎಸ್.ಐ(ಕಾ.ಸು & ಸಂಚಾರ),  ಲತಾ ವಿ ತಾಳೇಕರ್ ಪಿ.ಎಸ್.ಐ(ತನಿಖೆ), ಮಂಜುನಾಥ ಕಲ್ಲೇದೇವರು ಪಿ.ಎಸ್.ಐ,  ಯಾಸೀನ್ ವುಲ್ಲಾ ಎ.ಎಸ್.ಐ ಶ್ರೀ ನಾಗರಾಜ ಸುಣಗಾರ, ಹನುಮಂತ ಗೋಪನಾಳ,  ಶಿವರಾಜ.ಎಂ.ಎಸ್,  ಮಂಜುನಾಥ ಕ್ಯಾತಮ್ಮನವರ್, ಸಿದ್ದರಾಜು.ಎಸ್.ಬಿ,  ಸಿದ್ದೇಶ.H, ಸತೀಶ.ಟಿ.ವಿ ರಾಘವೇಂದ್ರ,  ಉಮೇಶ ಬಿಸ್ನಾಳ್, ಶಾಂತರಾಜ್, ಅಕ್ತರ್, ನಾಗರಾಜ ಕುಂಬಾರ, ವಿರೇಶ್, ಮಾರುತಿ ರವರುಗಳು ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ. ಸದರಿ ತಂಡಕ್ಕೆ  ಪೊಲೀಸ್ ಅಧೀಕ್ಷಕ  ರಿಷ್ಯಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top