ದಾವಣಗೆರೆ: ಮನೆ ಮುಂದಿನ ಮರ ಕಡಿಯುವ ವಿಚಾರಕ್ಕೆ ಎರಡು ಕುಟುಂಬದ ನಡುವೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬನ ಎದೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಜಿಲ್ಲೆಯ ಹರಿಹರ ತಾಲ್ಲೂಕಿನ ದೀಟೂರು ಗ್ರಾಮದಲ್ಲಿ ಸಂಭವಿಸಿದೆ.
ದಾವಣಗೆರೆ: ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆಹ್ವಾನ
ದೀಟೂರು ಗ್ರಾಮದ ಲಂಕೇಶ್ ಕೆ.ಬಿ. (40) ಕೊಲೆಯಾದ ವ್ಯಕ್ತಿಯಾಗಿದ್ದು, ಎದುರು ಮನೆಯ ಅವರ ಮಾವ ಹನುಮಂತಪ್ಪ ಕಲ್ಪಿನಿಂದ ಹೊಡೆದ ವ್ಯಕ್ತಿ. ಈ ಎರಡು ಕುಟುಂಬ ನಡುವೆ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಹಳೇ ದ್ವೇಷವಿತ್ತು. ಲಂಕೇಶ್ ಮನೆಯ ಮುಂದಿದ್ದ ಮರವನ್ನು ಹನುಮಂತಪ್ಪ ಕಡಿಯುತ್ತಿದ್ದರು. ನಮ್ಮ ಮನೆಯ ಮುಂದಿನ ಮರವನ್ನು ಏಕೆ ಕಡಿಯುತ್ತಿದ್ದೀಯಾ? ಎಂದು ಲಂಕೇಶ್ ಪ್ರಶ್ನಿಸಲು ಹೋದಾಗ ಜಗಳ ವಿಕೋಪಕ್ಕೆ ಹೋಗಿ ಈ ಕೊಲೆ ನಡೆದಿದೆ.
ದಾವಣಗೆರೆ: ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
ಹನುಮಂತಪ್ಪ ಕುಡುಗೋಲಿನಿಂದ ಹೊಡೆಯಲು ಹೋದಾಗ ಲಂಕೇಶ್ ಹಾಗೂ ಅವರ ಅಣ್ಣ ಚಂದ್ರಶೇಖರ್ ತಪ್ಪಿಸಿಕೊಂಡಿದ್ದಾರೆ. ಅದೇ ಸಮಯಕ್ಕೆ ಸ್ಥಳಕ್ಕೆ ಬಂದ ಹನುಮಂತಪ್ಪನ ಪತ್ನಿ ಲಕ್ಷ್ಮಮ್ಮ, ಮಗ ಪ್ರಕಾಶ್ ಹಾಗೂ ಮಗಳು ಗುತ್ತೆಮ್ಮ ಅವಾಚ್ಯವಾಗಿ ನಿಂದಿಸಿದ್ದಾರೆ. ಆಗ ಹನುಮಂತಪ್ಪ ಕಲ್ಲಿನಿಂದ ಲಂಕೇಶ್ನ ಎದೆಗೆ ಬಲವಾಗಿ ಹೊಡೆದಿದ್ದಾನೆ. ಕಲ್ಲೇಟು ತಿಂದ ಲಂಕೇಶ್ ಕುಸಿದು ಬಿದ್ದಿದ್ದಾರೆ.
ನಾಲ್ವರು ಆರೋಪಿಗಳ ಬಂಧನ
ಅಸ್ವಸ್ಥಗೊಂಡಿದ್ದ ಅವರನ್ನು ಹರಿಹರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯ ಲಾಗಿತ್ತು, ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗೆ ಕಾರಿನಲ್ಲಿ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಸಹೋದರ ಚಂದ್ರಶೇಖರ ದೂರಿನಲ್ಲಿ ವಿವರಿಸಿದ್ದಾರೆ.ಈ ಕುರಿತು ದೂರು ದಾಖಲಿಸಿಕೊಂಡಿರುವ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳಾದ ಹನುಮಂತಪ್ಪ, ಪತ್ನಿ ಲಕ್ಷ್ಮಮ್ಮ, ಮಕ್ಕಳಾದ ಪ್ರಕಾಶ್ ಹಾಗೂ ಗುತ್ತೆಮ್ಮ ಎಂಬುವರನ್ನು ಬಂಧಿಸಿದ್ದಾರೆ.


