ದಾವಣಗೆರೆ: ದಾವಣಗೆರೆಯಿಂದ ಹರಪನಹಳ್ಳಿಗೆ ಪ್ರಯಾಣಿಸುವಾಗ ಪ್ರಯಾಣಿಕರವ್ಯಾಗ್ ಬ್ಯಾಗ್ ಅದಲು ಬದಲಾಗಿದೆ. ಒಂದು ಲಕ್ಷ ರೂಪಾಯಿ ನಗದಿದ್ದ ಬ್ಯಾಗ್ ನ್ನು ಅಂಧತ್ವ ವಿದ್ಯಾರ್ಥಿಯೊಬ್ಬರು ಪೊಲೀಸರ ಸಮ್ಮುಖದಲ್ಲಿ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ; ಹವಾಮಾನ ಇಲಾಖೆ ಮುನ್ಸೂಚನೆ
ತೆಲಗಿ ಗ್ರಾಮದ ಹಾಲೇಶ್ (18) ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿ.ಮೈಸೂರಿಗೆ ಹೋಗಿದ್ದ ಹಾಲೇಶ್ ಭಾನುವಾರ ರಾತ್ರಿ ಮೈಸೂರಿನಿಂದ ರೈಲಲ್ಲಿ ಪ್ರಯಾಣ ದಾವಣಗೆರೆ ತಲುಪಿದ್ದರು. ಅಲ್ಲಿಂದ ಸ್ವ ಗ್ರಾಮ ತೆಲಿಗಿಗೆ ಹೊರಟಿದ್ದ ಸಾರಿಗೆ ಬಸ್ ಮೂಲಕ ಬರುವಾಗ ಜೀವವಿಜ್ಞಾನ ಉಪನ್ಯಾಸಕ ಧನಂಜಯ್ ಎಂಬುವವರ ಬ್ಯಾಗಿನೊಂದಿಗೆ ತಮ್ಮ ಬ್ಯಾಗ್ ಅದಲು ಬದಲಾಗಿ ಮನೆಯತ್ತ ತೆರಳಿದ್ದರು. ಮನೆಗೆ ತೆರಳುವ ಮಾರ್ಗ ಮಧ್ಯೆ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಒಂದು ಲಕ್ಷ ರೂಪಾಯಿ ಹಣ ಇರುವುದು ಕಂಡುಬಂದಿದೆ.
ಬ್ಯಾಗ್ ತಮ್ಮದಲ್ಲ ಎಂದು ಗೊತ್ತಾದ ತಕ್ಷಣ ಹಾಲೇಶ್, ಹರಪನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಹಣವಿದ್ದ ಬ್ಯಾಗನ್ನು ಒಪ್ಪಿಸಿದ್ದರು. ಪೊಲೀಸರು ತನಿಖೆ ನಡೆಸಿ ಉಪನ್ಯಾಸಕ ಧನಂಜಯ್ ಅವರನ್ನು ಸಂಪರ್ಕಿಸಿ ಠಾಣೆಯಲ್ಲಿ ಹಣವಿದ್ದ ಬ್ಯಾಗ್ ಹಸ್ತಾಂತರಿಸಿದರು. ಹಾಲೇಶ್ ಗೆ ಪೊಲೀಸ್ ಶ್ಲಾಘಿಸಿದ್ದಾರೆ.



