ದಾವಣಗೆರೆ: ಮನೆ ಬೀಗ ಮುರಿದು 30,18,000 ರೂ. ಮೌಲ್ಯದ ಸ್ವತ್ತು ಹಗಲು ದರೋಡೆ ಮಾಡಿದ ಆರೋಪಿಯನ್ನು ದಾವಣಗೆರೆ ಕೆ.ಟಿ.ಜೆ.ನಗರ ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿ 72 ಗಂಟೆಯೊಳಗೆ ಬಂಧನ ಮಾಡಿದ್ದಾರೆ.
ದಾವಣಗೆರೆ ದಕ್ಷಿಣ ಉಪ ಚುನಾವಣೆ; ಮುಸ್ಲಿಂ ಸಮುದಾಯಕ್ಕೆ ಟಿಕೆಟ್; ಸಂಸದರು ಹೇಳಿದ್ದೇನು..?
ಫೆ.17ರಂದು ಅಜ್ಗರ್ ಆಲಿ ಎಂಬುವವರು ತಮ್ಮ ಮನೆ ಬೀಗ ಹಾಕಿಕೊಂಡು ತನ್ನ ಹೆಂಡತಿಯೊಂದಿಗೆ ತಮ್ಮ ಮಗನನ್ನು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಚಿಕಿತ್ಸೆ ಕೊಡಿಸಿಕೊಂಡು ಸಂಜೆ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಬೀಗ ಮುರಿದು ಮನೆಯೊಳಗೆ ಪ್ರವೇಶ ಒಟ್ಟು 293 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು ಬೆಳ್ಳಿಯ ಆಭರಣಗಳನ್ನು ಹಾಗೂ ಅರ್ಮಾನಿ ಎಕ್ಸ್ಚೇಂಜ್ ವಾಚ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಕಳ್ಳರನ್ನು ಪತ್ತೆ ಮಾಡಿಕಿಡಿ ಎಂದು ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಕರ್ನಾಟಕ ಮರಾಠ ಸಮುದಾಯ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗೆ ಅರ್ಜಿ ಆಹ್ವಾನ
ಪ್ರಕರಣದ ಆರೋಪಿ ಹಾಗು ಮಾಲು ಪತ್ತೆಗಾಗಿ ಎಸ್ಪಿ ಶೇಖರ್.ಹೆಚ್. ಟಿ ನಿರ್ದೇಶನದಲ್ಲಿ ಎಎಸ್ಪಿ ಪರಮೇಶ್ವರ ಹೆಗಡೆ ಮತ್ತು ನಗರ ಡಿವೈಎಸ್ಪಿ ಶರಣ ಬಸವೇಶ್ವರ.ಬಿ. ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್. ಹೆಚ್.ಎಸ್. ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು.
ಈ ತಂಡವು ದಿನಾಂಕ 21.02.2026 ರಂದು ಮೇಲ್ಕಂಡ ಪ್ರಕರಣದ ಆರೋಪಿ ಗೌತಮ್ ರಾಜ್ @ ಪೋತ ರಾಜ್ @ ಸದ್ದಾಂಹುಸೇನ್, 35 ವರ್ಷ, ಆಟೋ ಚಾಲಕ, ಹಾಲಿ ವಾಸ-ವಿನೊಭನಗರ, ಶಿವಮೊಗ್ಗ, ಹಾಲಿ ವಾಸ- ಗಂಗಾವತಿ, ಕೊಪ್ಪಳ ಜಿಲ್ಲೆ. ಈತನನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ದಾವಣಗೆರೆ: ಜಿಲ್ಲೆಯಲ್ಲಿ ಖಾಲಿ ಇರುವ ಕರ್ನಾಟಕ ಒನ್ ಫ್ರಾಂಚೈಸಿ ತೆರೆಯಲು ಅರ್ಜಿ ಆಹ್ವಾನ; ಎಲ್ಲೆಲ್ಲಿ..?
ಆರೋಪಿತನನ್ನು ಕೂಲಂಕುಷವಾಗಿ ವಿಚಾರಣೆ ಮಾಡಿದ್ದು, ಆರೋಪಿ ಮನೆಯ ಬೀಗ ಮುರಿದು ಮನೆಯೋಳಗೆ ಪ್ರವೇಶ ಮಾಡಿ ಕಳ್ಳತನ ಮಾಡಿದ್ದ ಸುಮಾರು 29,29,000/- ರೂ ಬೆಲೆ ಬಾಳುವ 261 ಗ್ರಾಂ 560 ಮಿಲಿ ಬಂಗಾರದ ಆಭರಣಗಳು ಮತ್ತು 65000/- ರೂ ಬೆಲೆ ಬಾಳುವ 439 ಗ್ರಾಂ 560 ಮಿಲಿ ಬೆಳ್ಳಿಯ ಆಭರಣಗಳು ಹಾಗೂ 23000/- ರೂ ಬೆಲೆ ಬಾಳುವ ಅರ್ಮಾನಿ ಎಕ್ಸ್ ಚೇಂಜ್ ವಾಚ್ ಸೇರಿ ಒಟ್ಟು 30,18,000 ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿತನ ಹಿನ್ನೆಲೆ: ಆರೋಪಿತನ ವಿರುದ್ದ ದಾವಣಗೆರೆ ಜಿಲ್ಲೆಯ ಕೆ.ಟಿ.ಜೆ ನಗರದಲ್ಲಿ 3 ಪ್ರಕರಣಗಳು, ಬಸವನಗರ ಠಾಣೆಯಲ್ಲಿ 1 ಪ್ರಕರಣ ಮತ್ತು ಹರಿಹರ ನಗರ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿರುವುದಲ್ಲದೇ ಬೇರೆ ಬೇರೆ ಜಿಲ್ಲೆಗಳಲ್ಲಿ ಸೇರಿದಂತೆ ಒಟ್ಟು 19 ಹಗಲು ದರೋಡೆ ಕಳುವು ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ.
ಸದರಿ ಪ್ರಕರಣದಲ್ಲಿ ಆರೋಪಿತನ ಪತ್ತೆ ಹಾಗೂ ಕಳುವಾಗಿದ್ದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿಗಳಾದ ಕೆಟಿಜೆ ನಗರ ಠಾಣೆಯ ತಂಡಕ್ಕೆ ಎಸ್ಪಿ ಶೇಖರ್. ಹೆಚ್.ಟಿ, ಎಎಸ್ಪಿ ಪರಮೇಶ್ವರ.ಹೆಚ್ ಶ್ಲಾಘಿಸಿದ್ದಾರೆ.



