ದಾವಣಗೆರೆ: ಮಹಿಳೆ ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಯಿಂದ 2.80 ಲಕ್ಷ ಮೊತ್ತದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ ಅಡಿಕೆ ಧಾರಣೆ: ಮಾ.17ರ ದರ ಎಷ್ಟಿದೆ..?
ಜಿಲ್ಲೆಯ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ವಡೇರಹಳ್ಳಿ ಗ್ರಾಮದ ಸುಮಂಗಳಮ್ಮ (62) ಗೃಹಿಣಿ ಇವರು ಮಾ. 12ರಂದು ಬೆಳಗ್ಗೆ 06-30 ಗಂಟೆ ಸಮಯದಲ್ಲಿ ತಮ್ಮ ಮನೆಯಿಂದ ಕಳವೂರು ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿರುವಾಗ ಇವರ ಕೊರಳಿದ್ದ 50 ಗ್ರಾಂ ನ ಬಂಗಾರದ ಮಾಂಗಲ್ಯ ಸರವನ್ನು ಯಾರೋ ಮೂವರು ಬೈಕ್ ನಲ್ಲಿ ಬಂದು ಕಿತ್ತುಕೊಂಡು ಹೋಗಿರುವ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿದ್ದರು.
ಎಎಸ್ಪಿಗಳಾದ ವಿಜಯ ಕುಮಾರ್. ಎಂ. ಸಂತೋಷ್, ಜಿ.ಮಂಜುನಾಥ , ಡಿವೈಎಸ್ಪಿ ಬಸವರಾಜ್.ಬಿ.ಎಸ್ ಮಾರ್ಗದರ್ಶನದಲ್ಲಿ ಮತ್ತು ಮಾಯಕೊಂಡ ಸಿಪಿಐ ನಾಗರಾಜ ಡಿ. ಸಾರಥ್ಯದಲ್ಲಿ ಮಾಯಕೊಂಡ ಪೊಲೀಸ್ ಠಾಣೆಯ ಪಿಎಸ್ಐ ಅಜಯ.ಎಸ್.ಬಿ ಮತ್ತು ಹದಡಿ ಪೊಲೀಸ್ ಠಾಣೆಯ ಪಿಎಸ್ ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ತಂಡವನ್ನು ರಚಿಸಲಾಗಿತ್ತು.
ಈ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 1) ರವಿ ಕಿರಣ (27) ಆಟೋ ಡ್ರೈವರ್, ವಾಸ: ರಾಮನಗರ, ದಾವಣಗೆರೆ ಈತನನ್ನು ಬಂಧನ ಮಾಡಿ ವಿಚಾರಣೆ ನಡೆಸಿದಾಗ, ಸದರಿ ವ್ಯಕ್ತಿಯು ಈ ಮೇಲ್ಕಂಡ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಆರೋಪಿತನಿಂದ ಒಟ್ಟು 50 ಗ್ರಾಂ ತೂಕದ 2 ಲಕ್ಷ ರೂ ಮೊತ್ತದ ಮಾಂಗಲ್ಯ ಸರವನ್ನು ಮತ್ತು ಕೃತ್ಯಕ್ಕೆ ಬಳಸಿದ ಸುಮಾರು 80,000/- ರೂ ಮೌಲ್ಯದ ಹೊಂಡಾ ಶೈನ್ ಬೈಕ್ ವಶಕ್ಕೆ ಪಡಿಸಿಕೊಂಡಿದ್ದು, ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಆರೋಪಿತನೊಂದಿಗೆ ಪ್ರಕರಣದಲ್ಲಿ ಸಹಚರರಾದ 2) ರಮೇಶ (47) ಕೂಲಿ ಕೆಲಸ, ವಾಸ:ತಡಗ ಕಾಲೋನಿ, ಶಿವನಿ, ಅಜ್ಜಂಪುರ ತಾಲ್ಲೋಕು, ಚಿಕ್ಕಮಗಳೂರು ಜಿಲ್ಲೆ 3) ಮನು @ ಮನೋಜ (23), ಹಮಾಲಿ ಕೆಲಸ, ಅಜ್ಜಂಪುರ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರುಗಳು ನಾಪತ್ತೆಯಾಗಿದ್ದು, ಪತ್ತೆಕಾರ್ಯ ಮುಂದುವರೆದಿದೆ.
ಆರೋಪಿ ಹಿನ್ನೆಲೆ: ಮಂಗಳೂರಿನಲ್ಲಿ 05 ಸರಗಳ್ಳತನ ಪ್ರಕರಣಗಳಲ್ಲಿ, ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 01 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ. ಪತ್ತೆ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಶಿಸಿದ್ದಾರೆ.



