Connect with us

Dvgsuddi Kannada | online news portal | Kannada news online

ದಾವಣಗೆರೆ: ಆಟೋದಲ್ಲಿ ಬಿಟ್ಟು ಹೋಗಿದ್ದ 70 ಸಾವಿರ ಮೌಲ್ಯದ ಲ್ಯಾಪ್ ಟಾಪ್, ದಾಖಲೆಯ ಬ್ಯಾಗ್ ಹಸ್ತಾಂತರ

davangere sp 9

ದಾವಣಗೆರೆ

ದಾವಣಗೆರೆ: ಆಟೋದಲ್ಲಿ ಬಿಟ್ಟು ಹೋಗಿದ್ದ 70 ಸಾವಿರ ಮೌಲ್ಯದ ಲ್ಯಾಪ್ ಟಾಪ್, ದಾಖಲೆಯ ಬ್ಯಾಗ್ ಹಸ್ತಾಂತರ

ದಾವಣಗೆರೆ: ಮಹಿಳೆಯೊಬ್ಬರು ಆಟೋದಿಂದ ಇಳಿಯುವಾಗ ಆಟೋದಲ್ಲಿಯೇ ಬಿಟ್ಟು ಹೋಗಿದ್ದ 70,000 ರೂ. ಮೌಲ್ಯದ ಲ್ಯಾಪ್ ಟಾಪ್ ಮತ್ತು ದಾಖಲೆ ಇರುವ ಬ್ತಾಗ್ ಅನ್ನು ಜಿಲ್ಲಾ ಪೊಲೀಸರು ಪತ್ತೆ ಮಾಡಿ ವಾರಸ್ಸುದಾರರಿಗೆ ಹಸ್ತಾಂತರಿಸಿದ್ದಾರೆ.

ಬೆಂಗಳೂರು ನಗರ ವಾಸಿ ರೇಷ್ಮಾ ದಾವಣಗೆರೆ ನಗರದ ಜೆ.ಜೆ ಕಾನ್ವೆಂಟ್ ಹತ್ತಿರ ಇರುವ ಸಂಬಂಧಿಕರ ಮನೆಗೆ ಕಾರ್ಯಕ್ರಮದ ಪ್ರಯುಕ್ತ ಬಂದಿದ್ದರು. ದಿನಾಂಕ:20-01-2025 ರಂದು ಜೆಜೆ ಕಾನ್ವೆಂಟ್ ನಿಂದ ಆಟೋದಲ್ಲಿ ಹತ್ತಿಕೊಂಡು ವಿನೋಭನಗರ 13 ನೇ ಕ್ರಾಸ್ ಸಂಬಂದಿಕರ ಮನೆಗೆ ಆಟೋದಲ್ಲಿ ಇಳಿಯುವಾಗ ತಮ್ಮ ಜೊತೆ ಇದ್ದ ಲ್ಯಾಪ್ ಟಾಪ್ ಮತ್ತು ದಾಖಲಾತಿ ಇರುವ ಬ್ಯಾಗ್ ಕಳೆದುಕೊಂಡಿದ್ದರು. ಈ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ಮಾಲು ಪತ್ತೆ ಮಾಡಲು ಎಎಸ್ಪಿಗಳಾದ ವಿಜಯ ಕುಮಾರ, ಎಂ ಸಂತೋಷ, ಮಂಜುನಾಥ,ಜಿ ಹಾಗೂ ಡಿವೈಎಸ್ಪಿ ಶರಣ ಬಸವೇಶ್ವರ ಬೀಮರಾವ್. ಬಿ ಮಾರ್ಗದರ್ಶನದಲ್ಲಿ ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಇಮ್ತಿಯಾಜ್, ಮಹಮ್ಮದ್ ಆಲ್ತಾಫ್ ನೇತೃತ್ವದಲ್ಲಿ ಸಿಬ್ಬಂದಿಯವರನ್ನು ಒಳಗೊಂಡ ತಂಡವು ಕಳೆದ ಹೋದ ಮಾಲಿನ ಪತ್ತೆಕಾರ್ಯ ಮಾಡಿದೆ.

ರೇಷ್ಮಾ ಪ್ರಯಣಿಸಿದ ಆಟೋವನ್ನು ದಾವಣಗೆರೆ ಪೊಲೀಸ್ ಕಮಾಂಡ್ ಸೆಂಟರ್ ಸಿಬ್ಬಂದಿ ಸಹಾಯದಿಂದ ಕೆಎ-17 AA-4961 ನಂಬರಿನ ಆಟೋ ಮತ್ತು ಚಾಲಕ ಮಹಮ್ಮದ್ ಸಾದೀಕ್ 4 ನೇ ಕ್ರಾಸ್ ಬೀಡಿ ಲೇಔಟ್ , ಈತನನ್ನು ಪತ್ತೆಮಾಡಲಾಗಿದೆ. ಈತನಿಂದ ರೇಷ್ಮಾ ಕಳೆದುಕೊಂಡಿದ್ದ ಸುಮಾರು 70000/- ರೂ ಮೌಲ್ಯದ ಲ್ಯಾಪ್ ಟಾಪ್ ಮತ್ತು ಇತರೆ ದಾಖಲಾತಿಗಳು ಪತ್ತೆ ಮಾಡಿದ್ದು, ಈ ಸ್ವತ್ತನ್ನು ವಾರಸ್ಸುದಾರರಿಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಹಸ್ತಾಂತರಿಸಲಾಯಿತು.

ಮೇಲ್ಕಂಡ ಸ್ವತ್ತಿನ ಪತ್ತೆಕಾರ್ಯದಲ್ಲಿ ಯಶ್ವಸಿಯಾದ ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಇಮ್ತಿಯಾಜ್, ಮತ್ತು ಮಹಮ್ಮದ್ ಆಲ್ತಾಪ್, ನೇತೃತ್ವದಲ್ಲಿ ಸಿಬ್ಬಂದಿ ಮಂಜುನಾಥನಾಯ್ಕ, ನರೇಶ್ ಎಪಿ, ಖಾಜಾ ಹುಸೇನ್ ಅತ್ತಾರ್, ದಯಾನಂದ. ಎನ್ ಹಾಗೂ ಕಮಾಂಡ್ ಸೆಂಟರ್ ಸಿಬ್ಬಂದಿಯವರನ್ನೊಳಗೊಂಡ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ ಶ್ಲಾಫಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top