ದಾವಣಗೆರೆ: ಮೊಬೈಲ್ ಸುಲಿಗೆ ಮಾಡಿದ 24 ಗಂಟೆಯೊಳಗೆ ಕೆಟಿಜೆ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅ.31 ರಂದು ಬಾಬು ಎಂಬುವವರು ದಾವಣಗೆರೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಆಟೋದಲ್ಲಿ ಬರುತ್ತಿದ್ದಾಗ ಬೈಕ್ ನಲ್ಲಿ ಬಂದ 19-20 ವರ್ಷ ವಯಸ್ಸಿನ ಇಬ್ಬರು ಹುಡುಗರು ಮೊಬೈಲ್ ಅನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪಿಐ ಸುನೀಲ್ ಕುಮಾರ್.ಹೆಚ್.ಎಸ್. ಈ ಕೇಸಿನ ಆರೋಪಿ ಹಾಗು ಮಾಲು ಪತ್ತೆಗೆ ಸಿಬ್ಬಂದಿ ಒಳಗೊಂಡ ತಂಡ ರಚನೆ ಮಾಡಲಾಗಿತ್ತು. ಈ ತಂಡ ಎಸ್.ಎಸ್.ಹೈಟೆಕ್ ಆಸ್ಪತ್ರೆ ರಸ್ತೆ ಹತ್ತಿರದ ಎನ್.ಹೆಚ್.-4 ಬೈಪಾಸ್ ಸರ್ವಿಸ್ ರಸ್ತೆಯಲ್ಲಿ ದೂರಿನಲ್ಲಿ ನೀಡಿದ ಚಹರೆ ಗುರುತಿನ ಮಾಹಿತಿಯಂತೆ ಆರೋಪಿ ಎ1 ಅರವಿಂದ.ಎಂ. @ ಎಂ.ಸಿ.ಸ್ಟಾಂಡ್ ( 19 ) ಪೇಂಟ್ ಕೆಲಸ ವಾಸ: ಹಳೇ ಚಿಕ್ಕನಹಳ್ಳಿ, ಹರಳಯ್ಯ ನಗರ, ದಾವಣಗೆರೆ ಹಾಲಿ ವಾಸ ನವಲೆ ಡಬಲ್ ರಸ್ತೆ ಬಸ್ ಸ್ಟಾಂಡ್ ಹತ್ತಿರ, ಶಿವಮೊಗ್ಗ. ಎ2 ಕಿರಣ್ ನಾಯ್.ಕೆ (19) ತರಕಾರಿ ಮಾರ್ಕೇಟ್ ನಲ್ಲಿ ಹಮಾಲಿ ಕೆಲಸ, ವಾಸ: ನಿಟ್ಟುವಳ್ಳಿ ದಾವಣಗೆರೆ. ಇವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇಬ್ಬರು ಆರೋಪಿತರನ್ನು 24 ಗಂಟೆಗಳ ಒಳಗಾಗಿ ಬಂಧಿಸಿ ಆರೋಪಿತರಿಂದ ಒಟ್ಟು 9,000/-ರೂ ಮೌಲ್ಯದ ಮೊಬೈಲ್ ಫೋನ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಎಸ್ಪಿ ಉಮಾಪ್ರಶಾಂತ್ ಶ್ಲಾಘಿಸಿದ್ದಾರೆ.



