Connect with us

Dvgsuddi Kannada | online news portal | Kannada news online

ದಾವಣಗೆರೆ; ಮೇಲ್ಬಾವಣಿ ತಗಡು, ಯುಪಿಎಸ್ ಬ್ಯಾಟರಿ ಕಳ್ಳತನ: 2.21 ಲಕ್ಷ ಮೌಲ್ಯದ ಸ್ವತ್ತು ವಶ

ದಾವಣಗೆರೆ

ದಾವಣಗೆರೆ; ಮೇಲ್ಬಾವಣಿ ತಗಡು, ಯುಪಿಎಸ್ ಬ್ಯಾಟರಿ ಕಳ್ಳತನ: 2.21 ಲಕ್ಷ ಮೌಲ್ಯದ ಸ್ವತ್ತು ವಶ

ದಾವಣಗೆರೆ; ಮೇಲ್ಬಾವಣಿಯ ತಗಡು, ಬ್ಯಾಟರಿ ಯುಪಿಎಸ್ ಕಳ್ಳತನ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, 2.21 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.

ಚನ್ನಗಿರಿ ತಾಲ್ಲೂಕು ಕೊರಟಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶೆಟ್ಟಿಹಳ್ಳಿ ಗ್ರಾಮದ ಗೋಮಾಳ ಜಾಗದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಾಕಲಾಗಿದ್ದ ಮೇಲ್ಬಾವಣಿ ತಗಡುಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಪ್ರಜ್ವಲ್, ಕೃಷ್ಣಮೂರ್ತಿ ಪಾಂಡೋಮಟ್ಟಿ ಎಂಬುವವರನ್ನು ಬಂಧಿಸಿ, ಇವರಿಂದ 2.21 ಲಕ್ಷ ರೂ.‌ಬೆಲೆ ಬಾಳುವ ತಗಡುಗಳು, ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಚನ್ನಗಿರಿ ಪೊಲೀಸ್ ಠಾಣೆಯಸಿಪಿಐ ಪಿ.ಬಿ. ಮಧು, ಪಿಎಸ್‌ಐ ಕೆ.ಎನ್. ಚಂದ್ರಶೇಖರ್, ಎಎಸ್‌ಐ ಹೆಚ್.ಎನ್. ಶಶಿಧರ, ಸಿಬ್ಬಂದಿ ರಂಗಪ್ಪ, ಬೀರೇಶ್ ಪುಟ್ಟಕ್ಕನವರ್, ಅರುಣ್ ಕುಮಾರ್, ನರೇಂದ್ರಸ್ವಾಮಿ, ಬೀರಪ್ಪ, ಜಗದೀಶ್ ಅವರನ್ನು ಎಸ್ಪಿ ಡಾ. ಅರುಣ್ ಶ್ಲಾಘಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top