Connect with us

Dvgsuddi Kannada | online news portal | Kannada news online

ದಾವಣಗೆರೆ:‌‌ ಸೂಳೆಕೆರೆಯ ಗುಡ್ಡಕ್ಕೆ ಬೆಂಕಿ; ನಂದಿಸಲು ಹರಸಾಹಸ; ಅಪಾರ ಪ್ರಮಾಣ ಅರಣ್ಯ ನಾಶ

ಚನ್ನಗಿರಿ

ದಾವಣಗೆರೆ:‌‌ ಸೂಳೆಕೆರೆಯ ಗುಡ್ಡಕ್ಕೆ ಬೆಂಕಿ; ನಂದಿಸಲು ಹರಸಾಹಸ; ಅಪಾರ ಪ್ರಮಾಣ ಅರಣ್ಯ ನಾಶ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಏಷ್ಯಾದ ಎರಡನೇ ಅತಿ ದೊಡ್ಡ ಸೂಳೆಕೆರೆಯ (ಶಾಂತಿ ಸಾಗರ, sulekere) ಗುಡ್ಡಕ್ಕೆ ಬೆಂಕಿ‌ (Fire to the forest) ಬಿದ್ದಿದ್ದು, ಬೆಂಕಿ ನಂದಿಸಲು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.

  • ಸೂಳೆ ಕೆರೆ ಗುಡ್ಡಕ್ಕೆ ಆಕಸ್ಮಿಕ ಬೆಂಕಿ
  • ಸೂಳೆ ಯಾತ್ರಿನಿವಾಸದ ಹಿಂಭಾಗದ ಗುಡ್ಡಕ್ಕೆ ಬೆಂಕಿ
  • ಅಪಾರ ಪ್ರಮಾಣದ ಅರಣ್ಯ ನಾಶ
  • ಬೆಂಕಿ ನಂದಿಸಲು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ

ಗುಡ್ಡಕ್ಕೆ ದನಕಾಯಲು ಹೋದ ಕಿಡಿಗೇಡಿಗಳು ಬೀಡಿ ಸೇದಿ ಎಸೆದ ಕಡ್ಡಿಯಿಂದ ಒಣಗಿದ ಎಲೆ, ಹುಲ್ಲಿಗೆ ಬೆಂಕಿ ಹೊತ್ತಿದ್ದು, ಸೂಳೆಕೆರೆಯ ಯಾತ್ರಿನಿವಾಸದ ಹಿಂಭಾಗದ ಗುಡ್ಡಕ್ಕೆ ಬೆಂಕಿ ಆವರಿಸಿದೆ. ಇದರಿಂದ ಅಪಾರ ಪ್ರಮಾಣದ ಅರಣ್ಯ ಸುಟ್ಟು ಹೋಗಿದೆ. ಬೆಂಕಿಯು ಅರಿಶಿನಘಟ್ಟ ಹಾಗೂ ಬಸವರಾಜಪುರ ಗ್ರಾಮದವರೆಗೂ ಹರಡಿದೆ. ಗುಡ್ಡದಲ್ಲಿದ್ದ ವನ್ಯ ಜೀವಿಗಳು, ಪಕ್ಷಿ ಸಂಕುಲಕ್ಕೂ ಜೀವ ಹಾನಿಯಾಗಿದೆ. ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ತಂಡದ ನಿರಂತರ ಪರಿಶ್ರಮದಿಂದ ಬೆಂಕಿ ನಂದಿಸಲಾಗಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

To Top