ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಂಡಾಯದ ಕಿಚ್ಚು ಎದುರಾಗಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದ ಸಾದಿಕ್ ಪೈಲ್ವಾನ್ ಮನವೊಲಿಸಲು ಇಂದು (ಮಾ.26) ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ನಾಮಪತ್ರ ಹಿಂಪಡೆಯಲು ಇಂದು ನೀಡಿದ್ದ ಗಡುವು ಮುಗಿದರೂ ಪೈಲ್ವಾನ್ ಕಣದಿಂದ ಸರಿಯದ ಕಾರಣ ಕಾಂಗ್ರೆಸ್ ಗೆ ಬಂಡಾಯ ಬಿಸಿ ತಟ್ಟಿದೆ.
ದಾವಣಗೆರೆ: ಅಡಿಕೆ ಬೆಲೆ ಸ್ವಲ್ಪ ಚೇತರಿಕೆ; ಇಂದಿನ ಕನಿಷ್ಟ, ಗರಿಷ್ಠ ದರ ಎಷ್ಟಿದೆ ..?
ಕಾಂಗ್ರೆಸ್ ನಾಯಕರಿಗೆ ಗೋ ಬ್ಯಾಕ್ ಘೋಷಣೆ
ಮಧ್ಯಾಹ್ನ 3 ಗಂಟೆಗೆ ನಾಮಪತ್ರ ವಾಪಸ್ಗೆ ಗಡುವು ಇತ್ತು. ಆದರೆ, ಕಾಂಗ್ರೆಸ್ ಅಭ್ಯರ್ಥಿಯಾದ ಸಮರ್ಥ್ ಶಾಮನೂರ್ ಗೆ ಬಂಡಾಯ ಬಿಸಿ ತಪ್ಪಿಸಿ ಮನವೊಲಿಸಲು ಬೆಂಗಳೂರಿನ ನಾಯಕರು ಬರುವಷ್ಟರಲ್ಲಿ 2:45 ಆಗಿತ್ತು. ಈ ವೇಳೆ ಪೈಲ್ವಾನ್ ಮನೆ ಮುಂದೆ ಜಮಾಯಿಸಿದ್ದ ನೂರಾರು ಬೆಂಬಲಿಗರಿಂದ ನಾಯಕರ ವಿರುದ್ಧ ಗೋ ಬ್ಯಾಕ್ ಘೋಷಣೆ ಕೂಗಿದರು. ಈ ವೇಳೆ ಸಾಧಿಕ್
ಕಾಂಗ್ರೆಸ್ ನಾಯಕರ ಸಂಧಾನಕ್ಕೂ ಬಗ್ಗದ ಪೈಲ್ವಾನ್
ವಿಧಾನ ಪರಿಷತ್ತಿನ ಕಾಂಗ್ರೆಸ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹಾಗೂ ಶಾಸಕ ರಿಝ್ವಾನ್ ಅರ್ಷದ್ರಿಂದ ಸಭೆ ನಡೆದರೂ ಸಂಧಾನ ಸಭೆ ಫಲ ನೀಡಿಲ್ಲ. ಸಚಿವ ಝಮೀರ್ ಅಹ್ಮದ್ ಬರುವ ನಿರೀಕ್ಷೆಯಲ್ಲಿದ್ದ ಬೆಂಬಲಿಗರು, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಶಾಸಕ ರಿಝ್ವಾನ್ ಅರ್ಷದ್ ಅವರನ್ನು ಕಂಡು ಆಕ್ರೋಶ ಹೊರಹಾಕಿದರು. ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯದಂತೆ ಪೈಲ್ವಾನ್ ಮೇಲೆ ಬೆಂಬಲಿಗರು ಒತ್ತಡ ಹೇರಿದರು. ಮಾತುಕತೆ ಅಸಾಧ್ಯವಾದಾಗ ನಾಯಕರು ಪೈಲ್ವಾನ್ ಅವರನ್ನು ಮನೆಯೊಳಗೆ ಕರೆದೊಯ್ದು ಚರ್ಚೆ ನಡೆಸಿದರು.
ಚುನಾವಣೆ ಕಣದಲ್ಲಿ ಉಳಿದ ಪೈಲ್ವಾನ್
ಮಧ್ಯಾಹ್ನ 2:50ಕ್ಕೆ ಮನೆಯಿಂದ ಹೊರಬಂದ ನಾಯಕರು, ಸಮಯದ ಅಭಾವದಿಂದ ನಾಮಪತ್ರ ಹಿಂಪಡೆಯಲು ಸಾಧ್ಯವಾಗಲಿಲ್ಲ. ಪೈಲ್ವಾನ್ ನಮ್ಮ ಕುಟುಂಬದ ಸದಸ್ಯರು, ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ಆ ವೇಳೆಗೆ ಚುನಾವಣೆ ಕಣದಲ್ಲಿ ಪೈಲ್ವಾನ್ ಹೆಸರು ಅಧಿಕೃತವಾಗಿ ಉಳಿದಿತ್ತು.



