Connect with us

Dvgsuddi Kannada | online news portal | Kannada news online

ಭದ್ರಾ ಡ್ಯಾಂಗೆ 30 ಸಾವಿರ ಕ್ಯೂ. ಒಳ ಹರಿವು; ಇಂದಿನ ನೀರಿನ ಮಟ್ಟ 158 ಅಡಿ

ದಾವಣಗೆರೆ

ಭದ್ರಾ ಡ್ಯಾಂಗೆ 30 ಸಾವಿರ ಕ್ಯೂ. ಒಳ ಹರಿವು; ಇಂದಿನ ನೀರಿನ ಮಟ್ಟ 158 ಅಡಿ

ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾಶಯ ಪ್ರದೇಶ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದು, ಭದ್ರಾ ಡ್ಯಾಂ ಒಳಹರಿವು ಹೆಚ್ಚಾಗಿದೆ.  ಇಂದು (ಜು.05) ಬೆಳಗ್ಗೆ 6 ಗಂಟೆ ವೇಳೆಗೆ 30,167 ಕ್ಯೂಸೆಕ್ಸ್ ಒಳ ಹರಿವು ಇದ್ದು, ನೀರಿನ ಮಟ್ಟ 158.06 ಅಡಿಗೆ ತಲುಪಿದೆ. ನಿನ್ನೆ (ಜು.04) 155.07 ಅಡಿಯಷ್ಟು ನೀರಿತ್ತು.

ಕಳೆದ ಎರಡ್ಮೂರು ದಿನದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಳ ಹರಿವು ಹೆಚ್ಚಳವಾಗಿದೆ.165 ಅಡಿ ತಲುಪಿದ ನಂತರವಷ್ಟೇ ಮುಂಗಾರು ಹಂಗಾಮಿನ ಭತ್ತ, ಕಬ್ಬು, ಮೆಕ್ಕೆಜೋಳ, ತೋಟಗಾರಿಕೆ ಬೆಳೆಗಳಾದ ಅಡಿಕೆ,ತೆಂಗಿನ ಬೆಳೆಗೆ ನೀರು ಬಿಡುವುದಾಗಿ ಕಾಡಾ ಮಾಹಿತಿ ನೀಡಿದೆ.

  • ನೀರಿನ ಸಂಗ್ರಹದ ವಿವರ
  • ಇಂದಿನ ನೀರಿನ ಮಟ್ಟ 158.06 ಅಡಿ
  • ಪೂರ್ಣ ಮಟ್ಟ:186 ಅಡಿ
  • ಇಂದಿನ ಸಾಮರ್ಥ್ಯ: 41.536 ಟಿಎಂಸಿ
  • ಒಟ್ಟು ಸಾಮರ್ಥ್ಯ:71.535 ಟಿಎಂಸಿ
  • ಒಳಹರಿವು: 30,167 ಕ್ಯೂಸೆಕ್ಸ್
  • ಒಟ್ಟು ಹೊರಹರಿವು: 133 ಕ್ಯೂಸೆಕ್ಸ್
  • ಬಲದಂಡೆ ನಾಲೆ: 0.00 ಕ್ಯೂಸೆಕ್ಸ್
  • ಎಡದಂಡೆ ನಾಲೆ: 0.00ಕ್ಯೂಸೆಕ್ಸ್
  • ಕಳೆದ ವರ್ಷ ಈ ದಿನ : 155.3 ಅಡಿ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top